- Advertisement -
- Advertisement -
ಬೆಳಗಾವಿ: ನಿವೃತ್ತ ನೌಕರನೊಬ್ಬನಿಗೆ ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್ ಮಾಡುವುದಾಗಿ ಹೇಳಿ ದಾಖಲೆ ಪಡೆದ ಸೈಬರ್ ವಂಚಕರು ಬರೋಬ್ಬರಿ ₹10 ಲಕ್ಷ ವಂಚಿಸಿದ್ದಾರೆ.
ನಿವೃತ್ತ ನೌಕರ ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ನಿವಾಸಿ ಯಲ್ಲಪ್ಪ ಜಾಧವ ಎಂಬುವವರಿಗೆ ಕರೆ ಮಾಡಿದ ವಂಚಕರು, ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್ ಮಾಡುವುದಾಗಿ ಹೇಳಿ ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿಗಳನ್ನು ವಾಟ್ಸ್ಆಪ್ ಮೂಲಕ ಪಡೆದಿದ್ದಲ್ಲದೇ ಯಪ್ಪಲ್ಲ ಅವರ ಮೊಬೈಲ್ಗೆ ಬಂದ ಓಟಿಪಿನ್ನ ಸಹ ಪಡೆದುಕೊಂಡಿದ್ದು, ಬಳಿಕ 102 ಬಾರಿ ಹಣ ವಿಡ್ರಾ ಮಾಡಿ 10 ಲಕ್ಷ ರೂಪಾಯಿ ವಂಚಿಸಿದ್ದಾರೆ.
25 ವರ್ಷದ ದುಡಿಮೆಯ ಹಣವನ್ನು ಕಳೆದುಕೊಂಡು ಕಂಗಾಲಾಗಿರುವ ಯಲ್ಲಪ್ಪ, ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು, ಕೇಸ್ ದಾಖಲಿಸಿಕೊಂಡ ಪೊಲೀಸರು ಹಣ ವರ್ಗಾವಣೆಯಾದ ಅಕೌಂಟ್ ಸ್ಥಗಿತಗೊಳಿಸಲು ಸೈಬರ್ ಸೇಲ್ ಗಮನಕ್ಕೆ ತಂದಿದ್ದಾರೆ.
- Advertisement -