Saturday, April 20, 2024
spot_imgspot_img
spot_imgspot_img

ಬೆಳ್ತಂಗಡಿ : “ಅಜ್ಜ ನಾನು ಆರಾಮಾಗಿದ್ದೇನೆ……”-ಎರಡು ದಿನಗಳ ನಂತರ ಮಗುವಿನ ಧ್ವನಿ ಕೇಳಿದ ಮನೆಯವರು

- Advertisement -G L Acharya panikkar
- Advertisement -

ಬೆಳ್ತಂಗಡಿ: “ನಾನಿಲ್ಲಿ ಆರಾಮವಾಗಿದ್ದೇನೆ.. ಬೆಳಿಗ್ಗೆ ತಿಂಡಿ ತಿಂದೆ..” ಇದು ಗುರವಾರ ಸಂಜೆ ಅಪಹರಣಕ್ಕೊಳಗಾಗಿ ಇದೀಗ ಕೋಲಾರದಲ್ಲಿ ಪೊಲೀಸ್ ರಕ್ಷಣೆಯಲ್ಲಿರುವ ಉಜಿರೆಯ ಬಾಲಕ ಅನುಭವ್ ಮಾತುಗಳು.

ಕೋಲಾರದಲ್ಲಿ ಪೊಲೀಸರ ರಕ್ಷಣೆಯಲ್ಲಿರುವ ಎಂಟು ವರ್ಷದ ಬಾಲಕ ಅನುಭವ್ ಉಜಿರೆಯಲ್ಲಿರುವ ಅಜ್ಜ ಎ.ಕೆ. ಶಿವನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಕಳೆದೆರಡು ದಿನಗಳಿಂದ ಮಗು ಕಾಣದೆ ಒದ್ದಾಡಿದ್ದ ಮನೆಯವರಿಗೆ ಮಗುವಿನೊಂದಿಗೆ ಮಾತನಾಡಿದ ಬಳಿಕ ಇದೀಗ ಸಮಾಧಾನವಾಗಿದೆ.

ಪೊಲೀಸರ ನಿರಂತರ ತನಿಖೆಯ ಬಳಿಕ ಇಂದು ನಸುಕಿನ ಜಾವ ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನನ್ನು ರಕ್ಷಿಸಿ, ಏಳು ಮಂದಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

ಆರೋಪಿಗಳಾದ ಮಂಡ್ಯ ಜಿಲ್ಲೆಯ ಹನುಮಂತ (21), ರಂಜಿತ್ (22), ಮೈಸೂರಿನ ಗಂಗಾಧರ (25), ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಕೋಮಲ್ (23), ಮಾಲೂರು ತಾಲೂಕಿನ ಮಂಜುನಾಥ್ (24) ಮತ್ತು ಮಹೇಶ್ ಕುಮಾರ್ (26) ರನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!