- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಮಂಜೊಟ್ಟಿಯ ಗಡಾಯಿಕಲ್ಲಿನ ಬಳಿ ಇರುವ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಇಂದು ಪತ್ತೆಯಾಗಿದೆ. ಮೃತ ಮಹಿಳೆ ಮಂಜೊಟ್ಟಿ ಸಮೀಪದ ಬೀಜದಡಿ ನಿವಾಸಿ ಚೆನ್ನಮ್ಮ (70) ಎನ್ನಲಾಗಿದೆ.
ಮಂಗಳವಾರದಂದು ಔಷಧಿ ತರಲೆಂದು ತೆರಳಿದ್ದ ವೇಳೆ ಮಹಿಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿದ್ದ ಇವರನ್ನು ಹುಡುಕುವ ಕಾರ್ಯ ನಡೆಯುತ್ತಿತ್ತು. ಇಂದು ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.
- Advertisement -