Friday, June 19, 2026
spot_imgspot_img
spot_imgspot_img

ಬಿಲ್ಲವ ಹೆಣ್ಣು ಮಕ್ಕಳು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ಬಗ್ಗೆ ಅವ್ಯಾಚ ಪದ ಬಳಕೆ ಪ್ರಕರಣ;

- Advertisement -
- Advertisement -

ಅರಣ್ಯಧಿಕಾರಿ ಸಂಜೀವ ಪೂಜಾರಿಗೆ ಕಠಿಣ ಶಿಕ್ಷೆ ನೀಡುವಂತೆ ಹಿಂ.ಜಾ. ವೇ. ಕಾರ್ಯಕರ್ತರಿಂದ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿಯಲ್ಲಿ ಪ್ರಾರ್ಥನೆ

ಬಿಲ್ಲವ ಹೆಣ್ಣು ಮಕ್ಕಳು ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ಬಗ್ಗೆ ಅತ್ಯಂತ ಕೆಟ್ಟ ಪದಗಳಲ್ಲಿ ನಿಂದನೆ ಮಾಡಿದ ಅರಣ್ಯ ಅಧಿಕಾರಿ ಸಂಜೀವ ಕಾಣಿಯೂರ ವಿರುದ್ದ ಅ.21 ಸೋಮವಾರ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿ, ಮಂಗಳೂರು ಇಲ್ಲಿ ಸಂಜೀವ ಪೂಜಾರಿಗೆ ಕಠಿಣ ಶಿಕ್ಷೆ ನೀಡುವಂತೆ, ಕ್ಷೇತ್ರಕ್ಕೆ ಬಂದು ಕ್ಷಮೆ ಕೇಳುವಂತೆ ದೇವರು ಮತ್ತು ಗುರುಗಳ ಪಾದ ಕಮಲಗಳಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಲಿಖಿತ್ ರಾಜ್ ಮೂಡುಶೆಡ್ಡೆ, ಸಹ ಸಂಯೋಜಕರುಗಳಾದ ಗಣೇಶ್ ಕೆದಿಲ, ನವೀನ್ ಮಂಗಳಾದೇವಿ, ಕಾರ್ಯಕಾರಣಿ ಸದಸ್ಯರುಗಳಾದ ಹರ್ಷಿತ್ ಶಕ್ತಿನಗರ, ಪ್ರಜ್ವಲ್ ಶಕ್ತಿನಗರ, ಸುಷಿತ್ ಬೋಳಾರ, ಹೇಮಂತೇಶ್ ಗೌಡ, ಸುವಿನ್ ಶೆಟ್ಟಿ , ಸುರತ್ಕಲ್ ನಗರ ಸಂಯೋಜಕ ಕಿರಣ್ ಜನತಾ ಕಾಲನಿ, ಶಕ್ತಿನಗರ ಮುಖಂಡರು ಮಣಿ ಶಕ್ತಿನಗರ, ಪ್ರಕೇಶ್ ಶಕ್ತಿನಗರ, ಪ್ರವೀಣ್ ಮತ್ತು ಸಂಘ ಪರಿವಾರದ ಮುಖಂಡರು, ಭಜನಾ ಸಮಿತಿ, ವಿವಿಧ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!