Thursday, March 28, 2024
spot_imgspot_img
spot_imgspot_img

ಬಂಟ್ವಾಳ: ಪ್ರಧಾನಿ 7 ವರ್ಷ ಪೂರೈಸಿದ ಹಿನ್ನಲೆ ಬಿಜೆಪಿ ಎಸ್.ಟಿ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ಭಾರತೀಯ ಜನತಾ ಪಾರ್ಟಿ ಎಸ್. ಟಿ. ಮೋರ್ಚಾ ಬಂಟ್ವಾಳ ಇದರ ವತಿಯಿಂದ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಜಿಯವರು ದೇಶದ ಪ್ರಧಾನಿಯಾಗಿ ಏಳು ವರ್ಷ (ಎರಡನೇ ಅವಧಿಯ 2ವರ್ಷ) ಪೂರೈಸುವ ಈ ಸುಸಂಧರ್ಭದಲ್ಲಿ ಸೇವಾ ಹೀ ಸಂಘಟನ್ ಕಾರ್ಯಕ್ರಮದಡಿಯಲ್ಲಿ ಬಂಟ್ವಾಳ ಶಾಸಕರ ವಾರ್ ರೂಂ ಕೋರಿಕೆಯಂತೆ ರಕ್ತದಾನ ಶಿಬಿರವನ್ನು ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಡೊಂಬಯ್ಯ ಅರಳ, ಉಪಾಧ್ಯಕ್ಷ ಜಯರಾಮ್ ನಾಯ್ಕ್ ಕುಂಟ್ರಕಲ, ದ. ಕ. ಜಿಲ್ಲಾ ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಯನ್. ಎರ್ಮೆನಾಡ್ ಎಸ್. ಟಿ. ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್, ಕುಕ್ಕಿನಾರ್, ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ್ ನರಿಕೊಂಬು, ಪ್ರಧಾನ ಕಾರ್ಯದರ್ಶಿಗಳಾದ ಯಶವಂತ ನಾಯ್ಕ್ ನಗ್ರಿ, ಸತೀಶ್ ನಾಯ್ಕ್ ಮಂಕುಡೆಕೋಡಿ, ಮನೋಜ್ ನಾಯ್ಕ್ ಕಂಚಿಲ, ಪ್ರಶಾಂತ್ ನಾಯ್ಕ್ ಕಂಚಿಲ ಹಾಗೂ ಮಂಡಲ ಯುವಮೋರ್ಚಾ ಕಾರ್ಯದರ್ಶಿ ದಯಾನಂದ್ ನಾಯ್ಕ್ ಉಪಸ್ಥಿತರಿದ್ದರು.

- Advertisement -

Related news

error: Content is protected !!