Monday, May 6, 2024
spot_imgspot_img
spot_imgspot_img

ನಾಡ ಬಾಂಬ್ ಗೆ ಬಲಿಯಾದ ಗರ್ಭಿಣಿ ಹಸು!

- Advertisement -G L Acharya panikkar
- Advertisement -

ಕೋಲಾರ: ಕಾಡುಹಂದಿಗಳ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್ ಸಿಡಿದು ಗಾಯಗೊಂಡಿದ್ದ ಗರ್ಭಿಣಿ ಸೀಮೆ ಹಸು ನರಳಾಡಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕಿನ ಹೊಸೂರು ಗ್ರಾಮದ ರೈತ ಶ್ರೀನಿವಾಸನ್ ಎಂಬುವರಿಗೆ ಸೇರಿದ ಸುಮಾರು 80 ಸಾವಿರ ರೂಪಾಯಿ ಮೌಲ್ಯದ ಹಸು, ಆಹಾರ ಅರಸಿಕೊಂಡು ಪಕ್ಕದ ಜಾಗದಲ್ಲಿ ಮೇಯುತ್ತಿದ್ದ ವೇಳೆ ನಾಡ ಬಾಂಬ್ ಸಿಡಿದು ಮೃತಪಟ್ಟಿದೆ.

ಈ ಭಾಗದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಹಂದಿ ಬೇಟೆಗೆ ಇಟ್ಟಿದ್ದ ಕೇಪ್ ಉಂಡೆ ಸಿಡಿದು ಹಸು ಬಾಯಿ ಛಿದ್ರವಾಗಿತ್ತು, ವಿಷ ಮದ್ದಿನ ಉಂಡೆ ಸಿಡಿತದ ರಭಸಕ್ಕೆ ಇನ್ನೇನು 1 ತಿಂಗಳಲ್ಲಿ ಕರುವಿಗೆ ಜನ್ಮ ನೀಡಬೇಕಿದ್ದ ಹಸು ನರಳಿ ನರಳಿ ಸಾವನ್ನಪ್ಪಿದೆ.

ಬೇಟೆಗಾರರು ಕಾಡು ಹಂದಿಗಾಗಿ ಸ್ಪೋಟಕ ವಸ್ತುಗಳನ್ನಿಟ್ಟು ಮಾಡಿದ್ದ ಈ ಕೃತ್ಯದಿಂದ ಎರಡು ಜೀವ ಬಲಿಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!