Friday, April 19, 2024
spot_imgspot_img
spot_imgspot_img

ಆಭರಣ, ನಗದು ಕಂಡು ಬೆಚ್ಚಿ ಬಿದ್ದ ಎಸಿಬಿ ಅಧಿಕಾರಿಗಳು!!

- Advertisement -G L Acharya panikkar
- Advertisement -

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಅವರ ಬ್ಯಾಟರಾಯನಪುರದ ಮನೆಯ ಮೇಲೆಯೂ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಅಲ್ಲಿ ಸಿಕ್ಕಿದ ಆಭರಣ ನೋಡಿ ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.


ರೇಣುಖಾ ಚಂದ್ರಶೇಖರ್ ಮನೆಯಲ್ಲಿ ಚಿನ್ನಾಭರಣ, ನಗ-ನಾಣ್ಯ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಿಗಳು ಪತ್ತೆಯಾಗಿವೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತ ರೇಣುಕಾ ಚಂದ್ರಶೇಖರ್, ಮಣಬಾರದಷ್ಟು ಚಿನ್ನಾಭರಣ, ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರಗಳು ಪತ್ತೆಯಾಗಿವೆ. ಸಿಕ್ಕ ಒಟ್ಟಾರೆ ಮೌಲ್ಯ 250 ಕೋಟಿಗೂ ಹೆಚ್ಚು ಎನ್ನಲಾಗುತ್ತಿದೆ. ಕೆಜಿಗಟ್ಟಲೇ ಚಿನ್ನ, ಬೆಳ್ಳಿಯನ್ನು ನೋಡಿದ ಅಧಿಕಾರಿಗಳೇ ಇಷ್ಟೊಂದು ಹೇಗೆ ಸಂಪಾದಿಸಿದ್ದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.


ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಆಪ್ತೆ ರೇಣುಕಾ ಮನೆಯಲ್ಲಿ ಬರೋಬ್ಬರಿ 3 ಕೆಜೆ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ನಗದು ಪತ್ತೆಯಾಗಿದೆ. ಅಲ್ಲದೇ 250 ಕೋಟಿ ಆಸ್ತಿ ಪತ್ರ, 40 ಬ್ಯಾಂಕ್ ಗಳ ಪಾಸ್ ಬುಕ್, 4 ಕೋಟಿ ಡಿಪಾಸಿಟ್, ನೂರಕ್ಕೂ ಹೆಚ್ಚು ಚೆಕ್ ಗಳು, ಒಪ್ಪಂದ ಪತ್ರಗಳು ಪತ್ತೆಯಾಗಿವೆ.


ಈ ಮಧ್ಯೆ, ವಿಚಾರಣೆಗೆ ಹಾಜರಾಗುವಂತೆ ಕೆಎಎಸ್ ಅಧಿಕಾರಿ ಡಾ.ಸುಧಾ ಅವರಿಗೆ ಎಸಿಬಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.

- Advertisement -

Related news

error: Content is protected !!