Saturday, April 20, 2024
spot_imgspot_img
spot_imgspot_img

ಮದುವೆ ಪ್ರಫೋಸಲ್ ತಿರಸ್ಕರಿಸಿದ್ದಕ್ಕೆ ಯುವತಿಯನ್ನ ಚಲಿಸುವ ರೈಲಿನಡಿ ನೂಕಿ ಕೊಲೆಯತ್ನ..!

- Advertisement -G L Acharya panikkar
- Advertisement -

ಮುಂಬೈ: ಮದುವೆ ಪ್ರಪೋಸಲ್ ತಿರಸ್ಕರಿಸಿದ್ದಕ್ಕೆ ಕೋಪಿಸಿಕೊಂಡ ವ್ಯಕ್ತಿಯೊಬ್ಬ ಮಹಿಳೆಯನ್ನ ರೈಲ್ವೆ ಟ್ರ್ಯಾಕ್​​ಗೆ ನೂಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಮುಂಬೈನ ಖಾರ್ ನಿಲ್ದಾಣದಲ್ಲಿ ವ್ಯಕ್ತಿ ಈ ಕೃತ್ಯ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಖಾರ್​​ ನಿವಾಸಿಯಾಗಿರುವ ಮಹಿಳೆಯ ತಲೆಗೆ ಬಲವಾದ ಏಟುಬಿದ್ದಿದ್ದು, 12 ಹೊಲಿಗೆ ಹಾಕಲಾಗಿದೆ ಅಂತಾ ವರದಿಯಾಗಿದೆ.

ಆರೋಪಿ ವ್ಯಕ್ತಿ ಹಾಗೂ ಮಹಿಳೆ ಕಳೆದ ಎರಡು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಉತ್ತಮ ಸ್ನೇಹ ಕೂಡ ಬೆಳೆದಿತ್ತು. ಆದರೆ ಇತ್ತೀಚೆಗೆ ಆರೋಪಿ ಕುಡಿತದ ದಾಸನಾಗಿದ್ದ. ಇದು ಆಕೆಗೆ ಗೊತ್ತಾಗಿದ್ದರಿಂದ ಅವನನ್ನ ದೂರ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಿಸಿಕೊಂಡಿದ್ದ ಆರೋಪಿ ಪದೇ ಪದೇ ಮಹಿಳೆಗೆ ಕಾಟ ಕೊಡಲು ಆರಂಭಿಸಿದ್ದ. ಇದರಿಂದ ನೊಂದ ಮಹಿಳೆ ದೂರು ಕೂಡ ನೀಡಿದ್ದಳು ಅಂತಾ ಪೊಲೀಸ್ ಅಧಿಕಾರಿ ವಿಜಯ್ ತಿಳಿಸಿದ್ದಾರೆ.

ವ್ಯಕ್ತಿ ಆಕೆಯನ್ನ ಫಾಲೋ ಮಾಡಿದ್ದಾನೆ. ಮಹಿಳೆ ಅಂಧೇರಿ ರೈಲ್ವೆ ನಿಲ್ದಾಣದಿಂದ ಖಾರ್​​ಗೆ ಬಂದಿಳಿದಿದ್ದಳು. ಆಕೆಯನ್ನ ಹಿಂಬಾಲಿಸಿ ಬಂದಿದ್ದ ಆರೋಪಿ ಸುಮೇದ್ , ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ಓಡಿ ಟ್ರ್ಯಾಕ್​ಗೆ ಹಾರಲು ಯತ್ನಿಸಿ ವಾಪಸ್ ಆಗಿದ್ದಾನೆ. ನಂತರ ಆ ಮಹಿಳೆಯನ್ನ ಹಿಡಿದು ಟ್ರ್ಯಾಕ್​ ಮೇಲೆ ಎಳೆದಾಡಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಆರೋಪಿ ಆಕೆಯನ್ನ ಟ್ರ್ಯಾಕ್​ ಒಳಗೆ ತಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಟ್ರೈನ್ ಕೂಡ ಅದೇ ಟ್ರ್ಯಾಕ್​ನಲ್ಲಿ ಪಾಸ್ ಆಗುತ್ತಿತ್ತು. ಸ್ವಲ್ಪ ಯಾಮಾರಿದ್ದರೂ ಆಕೆಯ ಪ್ರಾಣಕ್ಕೆ ಅಪಾಯ ಆಗುತ್ತಿತ್ತು ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!