- Advertisement -
- Advertisement -
ಕೆರೆಯೊಂದರಲ್ಲಿ ಗುರುವಾರ ದೋಣಿ ಮಗುಚಿಕೊಂಡಿದ್ದು, ಪ್ರವಾಸ ತೆರಳಿದ್ದ 14 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿರುವ ಘಟನೆ ಗುಜರಾತ್ (ಪಿಟಿಐ) ನಗರದ ಹೊರವಲಯದ ವಡೋದರದಲ್ಲಿ ನಡೆದಿದೆ.
ಶಾಲೆಯೊಂದರ 24 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರು ಪ್ರವಾಸ ತೆರಳಿದ್ದರು. ಹೊರವಲಯದ ಹರ್ನಿ ಕೆರೆಯಲ್ಲಿ ಅವಘಡ ಸಂಭವಿಸಿದೆ.
ನಾಪತ್ತೆಯಾಗಿರುವ ಇತರರಿಗೆ ಶೋಧ ಕಾರ್ಯ ನಡೆದಿದೆ. ಸದ್ಯ, 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಶವ ಪತ್ತೆಯಾಗಿದೆ. ಒಬ್ಬ ವಿದ್ಯಾರ್ಥಿಯನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮೃತ ಮಕ್ಕಳೆಲ್ಲ ಹತ್ತು ವರ್ಷದವರಾಗಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ದೋಣಿಯಲ್ಲಿ ತೆರಳಿದ್ದವರಲ್ಲಿ ಯಾರೂ ಜೀವರಕ್ಷಕ ಕವಚ ಧರಿಸಿರಲಿಲ್ಲ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
- Advertisement -