Sunday, May 12, 2024
spot_imgspot_img
spot_imgspot_img

ಕಾಸರಗೋಡು : ಬೈಕ್ ನಲ್ಲಿ ಬಂದು ಚಿನ್ನ ಎಗರಿಸಿ ಪರಾರಿ

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg
This image has an empty alt attribute; its file name is VC_PUC_-1-819x1024.jpg

ಕಾಸರಗೋಡು: ದಾರಿ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದು ವ್ಯಕ್ತಿ ಯೋ ರ್ವರ ಕುತ್ತಿಗೆಯಲ್ಲಿದ್ದ ಸುಮಾರು ಎರಡೂವರೆ ಪವನ್ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಪೈವಳಿಕೆ – ಚೇವಾರ್ ರಸ್ತೆಯ ಕಟ್ಟದಮನೆ ಎಂಬಲ್ಲಿ ನಡೆದಿದೆ.

ಕಟ್ಟದಮನೆ ನಿವಾಸಿ ಗೋಪಾಲ ಕೃಷ್ಣ ಭಟ್ ಎಂಬವರು ಬೆಳಿಗ್ಗೆ ಮನೆ ಸಮೀಪದ ತೋಟಕ್ಕೆ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಹಿಂಬಾಲಿಸಿ ತೋಟಕ್ಕೆ ತಲಪುತ್ತಿದ್ದಂತೆ ದಾರಿ ಕೇಳುವ ನೆಪದಲ್ಲಿ ಹತ್ತಿರ ಬಂದು ಓರ್ವ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಅದೇ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.

ಭಟ್ ರವರು ಬೆನ್ನಟ್ಟಿ ಬಂದರೂ ಬೈಕ್ ನಲ್ಲಿ ಇಬ್ಬರೂ ಚೇವಾರ್ ರಸ್ತೆಯಾಗಿ ಪರಾರಿಯಾಗಿದ್ದು , ಹೆಲ್ಮೆಟ್ ಧರಿಸಿದ್ದರಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ . ಕುಂಬಳೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು , ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿ ಸಿ ಟಿ ವಿ ದೃಶ್ಯಗಳನ್ನು ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!