ಕಾರು ಹತ್ತಿಸಿ ಸಹೋದರನನ್ನು ಹತ್ಯೆ ಮಾಡಿದ್ದ ಘಟನೆ ಶಿವಮೊಗ್ಗ ಸಾಗರ ತಾಲೂಕಿನ ಚಿಪ್ಪಳ್ಳಿ ಬಳಿಯ ರಸ್ತೆಯಲ್ಲಿ ನಡೆದಿದೆ.
ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ ಕೊಲೆಯಾದ ವ್ಯಕ್ತಿ ರಫೀಕ್ (45) ಮತ್ತು ಕೊಲೆಮಾಡಿದವರು ಇನಾಯತ್ ಮತ್ತು ಸಮೀರ್, ಎಂದು ಗುರುತಿಸಲಾಗಿದೆ.
ಸಹೋದರರ ನಡುವಿನ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು. ಸಹೋದರರ ಮಧ್ಯೆ ಗಲಾಟೆಯ ನಂತರ ಮೃತ ರಫಿಕ್ ರಸ್ತೆ ಮಧ್ಯೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಂತೆ ಕಾಣ್ತಿದ್ದಾರೆ. ಆರೋಪಿಗಳಾದ ಇನಾಯತ್ ಮತ್ತು ಅಕ್ಕನ ಮಗ ಸಮೀರ್, ರಸ್ತೆ ಬಳಿ ಕಾರು ಹತ್ತಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ದೃಶ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.
ಜನಸಂಚಾರದ ನಡುವೆಯೇ ಸಹೋದರನ ಮೇಲೆ ಕಾರು ಹತ್ತಿಸಿ ಕೊಲೆ ಮಾಡ್ತಿರುವ ದೃಶ್ಯ ತುಂಬಾನೇ ಭಯಾನಕವಾಗಿದೆ. ಕೊಲೆ ಮಾಡಿದ ಬಳಿಕ ಸಾಗರ ತಾಲೂಕಿನ ಆನಂದಪುರದಲ್ಲಿರುವ ಮುರುಘಾ ಮಠದ ಆವರಣಕ್ಕೆ ಹೋಗಿ ಬಟ್ಟೆ ಬದಲಿಸಿದ್ದ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.