- Advertisement -
- Advertisement -
ನವದೆಹಲಿ: ಹಸುವಿನ ಸಗಣಿಯಿಂದ ತಯಾರಿಸಿದ ಚಿಪ್ನಿಂದ ಮೊಬೈಲ್ ಫೋನ್ ರೇಡಿಯೇಷನ್ಸ್ ತಡೆಗಟ್ಟಬಹುದು ಎಂಬ ಹೇಳಿಕೆ ಹಿನ್ನೆಲೆ ಸುಮಾರು 600ಕ್ಕೂ ಹೆಚ್ಚು ವಿಜ್ಞಾನಿಗಳು ಸಾಕ್ಷಿ ಕೇಳಿದ್ದಾರೆ.
ಕಳೆದ ವಾರ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕತಿರಿಯಾ ಸಗಣಿಯ ಚಿಪ್ ಬಿಡುಗಡೆ ಮಾಡಿದ್ರು. ಈ ಚಿಪ್ ಅಳವಡಿಸಿದ್ರೆ ಮೊಬೈಲ್ಗಳಿಂದ ಹೊರಹೊಮ್ಮುವ ಹಾನಿಕಾರಕ ರೇಡಿಯೇನ್ಸ್ ತಡೆಗಟ್ಟಬಹುದು. ಸಗಣಿ, ರೇಡಿಯೇಷನ್ಸ್ ತಡೆಯುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಹೇಳಿದ್ದರು.
ಈ ಹಿನ್ನೆಲೆ ವಲ್ಲಭಭಾಯ್ ಅವರಿಗೆ 600ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ವಿಜ್ಞಾನ ಬೋಧಕರು ಪತ್ರ ಬರೆದು, ನಿಮ್ಮ ಹೇಳಿಕೆಯನ್ನ ದೃಢಪಡಿಸಲು ವೈಜ್ಞಾನಿಕ ಆಧಾರವೇನು ಎಂದು ಕೇಳಿದ್ದಾರೆ. ಈ ಸಂಬಂಧ ಮಾಹಿತಿ ಅಥವಾ ಯಾವುದಾದ್ರೂ ಎಕ್ಸ್ಪೆರಿಮೆಂಟ್ಸ್ ನಡೆದಿದ್ರೆ ಅದರ ಮಾಹಿತಿ ನೀಡುವೀರಾ ಎಂದು ಕೇಳಿದ್ದಾರೆ.
- Advertisement -