ವೀರಕಂಬ : ದ. ಕ. ಜಿ. ಪಂ. ಹಿ ಪ್ರಾ. ಶಾಲೆ, ಕೆಲಿಂಜ ಪ್ರತಿಭಾ ಪುರಸ್ಕಾರ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವು ದಿನಾಂಕ 30-12-2023ನೇ ಶನಿವಾರ ಪೂರ್ವಾಹ್ನ ಗಂಟೆ 9.30ಕ್ಕೆ ಕೆಲಿಂಜ ಶಾಲಾ ರಂಗಮಂದಿರದಲ್ಲಿ ನಡೆಯಲಿರುವುದು.
ದಿನಾಂಕ 30-12-2023ನೇ ಶನಿವಾರ ಪೂರ್ವಾಹ್ನ ಗಂಟೆ 9.30ಕ್ಕೆ ಧ್ವಜಾರೋಹಣವನ್ನು ರಾಜೇಂದ್ರ ಹೊಳ್ಳ ಮಾಲಕರು, ಹೋಟೆಲ್ ಲಕ್ಷ್ಮೀ ಗಣೇಶ್ ಕಲ್ಲಡ್ಕ ಇವರು ನಡೆಸಲಿರುವರು. ಬೆಳಿಗ್ಗೆ ಗಂಟೆ 10.30 ರಿಂದ 11.30 ರವೆರೆಗೆ ಹಳೆ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ ಬಳಿಕ ಮಧ್ಯಾಹ್ನ ಭೋಜನ ವ್ಯವಸ್ಥೆ ನಡೆಯಲಿರುವುದು. ಸಂಜೆ ಗಂಟೆ 4.30ರಿಂದ “ಸಾಂಸ್ಕೃತಿಕ ವೈವಿಧ್ಯ” ಕೆಲಿಂಜ, ಮಂಗಲಪದವು ಅಂಗನವಾಡಿ ಮಕ್ಕಳಿಂದ ಮತ್ತು ಕೆಲಿಂಜ ಶಾಲಾ LKG & UKG, ಶಾಲಾ ವಿದ್ಯಾರ್ಥಿಗಳಿಂದ, ಕೆಲಿಂಜ ಶಾಲಾ ಹಳೆ ವಿದ್ಯಾರ್ಥಿಗಳಿಂದ ನಡೆಯಲಿರುವುದು. ಹಾಗೂ “ಬದ್ಕ್ಯೆರೆ ಕಲ್ಪುಲೆ” ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿರುವುದು.
ಸಾಯಂಕಾಲ ಗಂಟೆ 6.30ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜೇಶ್ ನ್ಯಾಕ್ ಯು. ಮಾನ್ಯ ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮಾಡಲಿದ್ದಾರೆ. ಲಲಿತಾ ಅಧ್ಯಕ್ಷರು, ಗ್ರಾಮ ಪಂಚಾಯತ್ ವೀರಕಂಬ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜನಾರ್ಧನ ಪೂಜಾರಿ ಉಪಾಧ್ಯಕ್ಷರು, ಗ್ರಾ. ಪಂ. ವೀರಕಂಬ , ಶೀಲಾ ನಿರ್ಮಲ ವೇಗಸ್ ಸದಸ್ಯರು, ಗ್ರಾ. ಪಂ. ವೀರಕಂಬ, ಸಂದೀಪ್ ಪೂಜಾರಿ ಸದಸ್ಯರು, ಗ್ರಾ. ಪಂ. ವೀರಕಂಬ , ಜಯಪ್ರಸಾದ್ ಕಲ್ಮಲೆ ಸದಸ್ಯರು, ಗ್ರಾ. ಪಂ. ವೀರಕಂಬ , ಉಮಾವತಿ ಸದಸ್ಯರು, ಗ್ರಾ. ಪಂ. ವೀರಕಂಬ, ರಘು ಪೂಜಾರಿ ಮಂಗಲಪದವು ಸದಸ್ಯರು, ಗ್ರಾ. ಪಂ. ವೀರಕಂಬ, ಅಬ್ದುಲ್ ರಹೀಮಾನ್ ಸದಸ್ಯರು, ಗ್ರಾ ಪಂ. ವೀರಕಂಬ, ಸುಬ್ರಾಯ ಪೈ ಗೌರವಾಧ್ಯಕ್ಷರು, RMSA ವಿಟ್ಲ , ಕೆ. ಎಂ. ರಫೀಕ್ ಸರ್ಕಲ್ ಇನ್ಸ್ಪೆಕ್ಟರ್, ಬೆಂಗಳೂರು , ಸತ್ಯಸುಂದರ ಭಟ್ ಕಲ್ಮಲೆ ಪ್ರಗತಿಪರ ಕೃಷಿಕರು , ಚೇತನಾ ರಾಮಚಂದ್ರ ಶೆಟ್ಟಿ ವಕೀಲರು, ಬಿ. ಸಿ. ರೋಡ್ ,ಯುವರಾಜ್ ನೆಕ್ಕಿಲಾರು ಮ್ಹಾಲಕರು, ವರಾಹ ಎಂಟರ್ ಪ್ರೈಸಸ್ ಪೂರ್ಲಿಪ್ಪಾಡಿ ಕಲ್ಲಡ್ಕ ,ರೂಪ ರಾಜೇಶ್ ಶೆಟ್ಟಿ ಸಾಯಿ ಶೀತಲ್ ಎಸ್ಟೇಟ್ ರಾಯಿ, ಡಿ. ಪದ್ಮನಾಭ ರಾವ್ ನಿವೃತ್ತ ಮುಖ್ಯ ಶಿಕ್ಷಕರು, ಕೆಲಿಂಜ ,ಪ್ರತಿಮಾ ವೈ. ವಿ. ಶಿಕ್ಷಣ ಸಂಯೋಜಕರು, ಬಂಟ್ವಾಳ , ಜ್ಯೋತಿ ಡಿ. ಸಮೂಹ ಸಂಪನ್ಮೂಲ ವ್ಯಕ್ತಿ, ಕಲ್ಲಡ್ಕ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.ಎಂದು
ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷರು ಮತ್ತು ಸದಸ್ಯರು ಹಳೆ ವಿದ್ಯಾರ್ಥಿ ಸಂಘ, ಜಯಂತಿ ಅಧ್ಯಕ್ಷರು ಮತ್ತು ಸದಸ್ಯರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಬಿ. ತಿಮ್ಮಪ್ಪ ನಾಯ್ಕ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಮಹಮ್ಮದ್ ಸವಾದ್ ವಿದ್ಯಾರ್ಥಿ ನಾಯಕ ಮತ್ತು ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.