- Advertisement -
- Advertisement -
ಕಾನತ್ತೂರು ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ ಹಿಂದೂ ಹೋರಾಟ ಸಮಿತಿ ಪುಣಚ ಮತ್ತು ವಿಟ್ಲ ತಾಲೂಕು ಹಿಂದೂ ಕಾರ್ಯಕರ್ತರು
ಪುಣಚ: ಸಂಘ ಪರಿವಾರ ಹಾಗೂ ಸ್ಥಳೀಯರ ವಿರೋಧಗಳ ನಡುವೆ ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರಿಕಟ್ಟೆ ಕೋಡಂಚಡ್ಕದಲ್ಲಿ ವಾಣಿಜ್ಯ ದನ ಸಾಕಣಾ ಕೇಂದ್ರ ಎಂಬ ಅಕ್ರಮ ಕಟ್ಟಡವೊಂದು ತಲೆ ಎತ್ತಿನಿಂತಿದೆ. ಅಬ್ದುಲ್ಲ ಮಾದುಮೂಲೆ ಮಾಲಕತ್ವದ ಈ ಕಟ್ಟಡದ ಬಗ್ಗೆ ಸ್ಥಳೀಯರೂ ಹಾಗೂ ಹಿಂದೂ ಸಂಘಟನೆಗಳು ತೀವ್ರ ವಿರೋಧಿಸಿ ಪ್ರತಿಭಟನೆ ನಡೆಸಿದರೂ ಪಂಚಾಯತ್ ಆಡಳಿತ ಸಮಿತಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ನ್ಯಾಯಾಲಯದ ಮೆಟ್ಟಿಲೇರಿರುವ ಈ ಪ್ರಕರಣದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಗಬೇಕು ಮತ್ತು ಈ ಅನ್ಯಾಯದಲ್ಲಿ ಪಾಲ್ಗೊಂಡವರಿಗೆ ದೇವರು ಶಿಕ್ಷೆ ನೀಡಬೇಕು ಎಂದು ಹಿಂದೂ ಹೋರಾಟ ಸಮಿತಿ ಪುಣಚ ಮತ್ತು ವಿಟ್ಲ ತಾಲೂಕು ವತಿಯಿಂದ ಕಾನತ್ತೂರು ಶ್ರೀ ದೇವರಲ್ಲಿ ಪ್ರಾರ್ಥನೆ ನಡೆಸಲಾಯಿತು.
- Advertisement -