- Advertisement -
- Advertisement -
ವಾರಾಣಸಿ: ಇಲ್ಲಿನ ರಾಜ್ ಘಾಟ್’ನಲ್ಲಿ ದೇವ್ ದೀಪಾವಳಿ ಮಹೋತ್ಸವನ್ನು ಪ್ರಧಾನಿ ನರೇಂದ್ರ ಮೋದಿ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ತೀಕ ಮಾಸದ ಹುಣ್ಣಿಮೆ ಆಚರಣೆ ಅಂಗವಾಗಿ ಗಂಗಾ ನದಿಯ ದಡದಲ್ಲಿ 15 ಲಕ್ಷ ದೀಪಗಳನ್ನು ಬೆಳಗಲಾಯಿತು. ಸಾಂಪ್ರದಾಯಿಕ ನೃತ್ಯಗಾರರು ನೃತ್ಯ ಪ್ರದರ್ಶಿಸಿದರು. ಜತೆಗೆ ಲೇಸರ್ ಶೋ ನಡೆಯಿತು.
ದೀಪಾವಳಿ ನಂತರ ಆಚರಿಸುವ ದೇವ್ ದೀಪಾವಳಿಯಲ್ಲಿ ಗಂಗಾ ನದಿ ದಡದಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸಲಾಯಿತು.
ಇದಕ್ಕೂ ಮೊದಲು ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ದೇವ್ ದೀಪಾವಳಿ ಮಹೋತ್ಸವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
- Advertisement -