- Advertisement -
- Advertisement -
ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಷ್ಟ ವಸೂಲಿಗೆ ಕ್ಲೇಮ್ಸ್ ಕಮಿಷನರ್ ನೇಮಕ ಮಾಡಲಾಗಿದೆ. ಹೈಕೋರ್ಟ್ ಕ್ಲೇಮ್ಸ್ ಕಮಿಷನರ್ಗೆ ಕಮಿಷನ್ ಆಫ್ ಎನ್ಕ್ವೈರಿ ಕಾಯ್ದೆ ಅಡಿ ಹೆಚ್ಚಿನ ಅಧಿಕಾರ ನೀಡಿ ಆದೇಶ ಹೊರಡಿಸಿದೆ.ಶೀಘ್ರ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.
ಕ್ಲೇಮ್ಸ್ ಕಮಿಷನರ್ ಆಗಿ ನ್ಯಾ.ಹೆಚ್.ಎಸ್.ಕೆಂಪಣ್ಣ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ವಿಶೇಷ ತಂಡಕ್ಕೆ ಅಕ್ಟೋಬರ್ 20ರೊ ಳಗೆ ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.ಈ ಕಾಯ್ದೆಯಡಿ ಕ್ಲೇಮ್ಸ್ ಕಮಿಷನರ್ ಸಾಕ್ಷಿಗಳಿಗೆ ಸಮನ್ಸ್ ನೀಡಲು ಹಾಗೂ ವಿಚಾರಣೆ ನಡೆಸಲು ಅಧಿಕಾರವಿದೆ.
- Advertisement -