Sunday, April 28, 2024
spot_imgspot_img
spot_imgspot_img

ವರದಕ್ಷಿಣೆ ಕಿರುಕುಳ; ರೈಲಿಗೆ ತಲೆ ಕೊಟ್ಟು ಮಹಿಳೆ ಆತ್ಮಹತ್ಯೆ

- Advertisement -G L Acharya panikkar
- Advertisement -

ವರದಕ್ಷಿಣೆ ಕಿರುಕುಳದಿಂದ ಮನನೊಂದು ರೈಲಿಗೆ ತಲೆ ಕೊಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ವಾದಕುಂಟೆ ಬಳಿ ನಡೆದಿದೆ.

ಲಕ್ಕಪ್ಪನಹಳ್ಳಿ ನಿವಾಸಿ ಭವ್ಯಾ (27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಿರುಮಲೇಗೌಡನಪಾಳ್ಯದ ಕಿರಣ್ ಜೊತೆ ಭವ್ಯಾ ಮದುವೆಯಾಗಿತ್ತು. ವರದಕ್ಷಿಣೆ ತರಲಿಲ್ಲವೆಂದು ಪದೇಪದೇ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಪತಿ ಕಿರಣ್, ಅತ್ತೆ ಭಾಗ್ಯಮ್ಮ, ಅಕ್ಕ ಲಾವಣ್ಯ, ತಂಗಿ ಭವ್ಯಾ ಅವರು ಕಿರುಕುಳ ನೀಡುತ್ತಿದ್ದರು.

ಪತಿ ಕುಟುಂಬದ ಕಿರುಕುಳ ತಾಳಲಾರದೆ ಭವ್ಯಾ ತವರು ಮನೆ ಸೇರಿಕೊಂಡಿದ್ದರು. ಇದರಿಂದ ನೊಂದು ರೈಲಿಗೆ ತಲೆ ಕೊಟ್ಟು ಭವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಯಶವಂತಪುರ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!