- Advertisement -
- Advertisement -
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ಗೆ ಮತ್ತೆ ಮೂರು ದಿನ ಎನ್ಸಿಬಿ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಇನ್ನು, ಎನ್ಸಿಬಿ ಪೊಲೀಸರು ಆರ್ಯನ್ನನ್ನು ಕಸ್ಟಡಿಗೆ ನೀಡುವಂತೆ ವಾದ ಮಂಡಿಸಿದ್ದರು. ಆರ್ಯನ್ ಪರ ವಕೀಲ ಸತೀಶ್ ಮಾನ್ಶಿಂಧೆ ಜಾಮೀನು ನೀಡಿ ಎಂದು ವಾದಿಸಿದ್ದರು. ಕೊನೆಗೂ ಸುಮಾರು ಮೂರು ಗಂಟೆಗಳ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಕ್ಟೋಬರ್ 7ನೇ ತಾರೀಕಿನವರೆಗೂ ಎನ್ಸಿಬಿ ಕಸ್ಟಡಿಗೆ ಕೊಟ್ಟಿದೆ.
ಎನ್ಸಿಬಿ ಪರ ವಕೀಲರು ಏನೆಲ್ಲ ವಾದ ಮಂಡಿಸಿದ್ದರು?
- ಆರ್ಯನ್ ಖಾನ್ ಕಸ್ಟಡಿಗೆ ಕೇಳಿ ಎನ್ಸಿಬಿ ವಾದ ಮಂಡನೆ
- ಯಾಕೆ ಆರ್ಯನ್ ಕಸ್ಟಡಿ ಅವಶ್ಯ ಎಂದು ಹೇಳಿದ ಎನ್ಸಿಬಿ
- ಆರ್ಯನ್ ಮೊಬೈಲ್ನಲ್ಲಿ ಆಘಾತಕಾರಿ ಅಂಶಗಳು ಪತ್ತೆ
- ಫೋಟೋ ರೂಪದಲ್ಲಿ ಇನ್ಕ್ರಿಮಿನೇಟಿಂಗ್ ಮಾಹಿತಿ ಲಭ್ಯ
- ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಡೆಯುವುದರ ಬಗ್ಗೆಯೂ ಮಾತು
- ಬೇರೆಯವರಿಗೆ ಹಂಚುವುದಕ್ಕಾಗಿ ಡ್ರಗ್ಸ್ ಪಡೆಯುವ ಮಾತು
- ರಿಯಾ ಚಕ್ರವರ್ತಿ ಪ್ರಕರಣ ಉಲ್ಲೇಖಿಸಿದ ಎನ್ಸಿಬಿ ವಕೀಲ
- ಆ ಪ್ರಕರಣ ಆದೇಶದ ಪ್ರಕಾರ ಕೂಡ ಇದು ಬೇಲು ರಹಿತ ಕೇಸ್
- ಎನ್ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಇದು ನಾನ್-ಬೇಲೇಬಲ್ ಅಫೆನ್ಸ್
- ಡ್ರಗ್ಸ್ಗಾಗಿ ಯಾವ ರೀತಿ ಹಣ ಪಾವತಿಸಬೇಕು ಅನ್ನೋದ್ರ ಬಗ್ಗೆ ಚರ್ಚೆ
- ಈ ವೇಳೆ ಹಲವು ಕೋಡ್ ನೇಮ್ಗಳನ್ನು ಬಳಿಸಿರುವ ಆರ್ಯನ್
- ಆರ್ಯನ್ ಸೇರಿ ಮೂವರೂ ಡ್ರಗ್ಸ್ ಜಾಲದ ಭಾಗವಾಗಿದ್ದಾರೆ.
- ಎನ್ಡಿಪಿಎಸ್ ಕಾಯ್ದೆ ಉದ್ದೇಶ ಡ್ರಗ್ಸ್ಗೆ ಕಡಿವಾಣ ಹಾಕಬೇಕು. ಹೀಗಾಗಬೇಕಾದರೆ ನಾವು ಪ್ರಕರಣದ ಬೇರಿಗೆ ಹೋಗಬೇಕು. ಹಣ ಹೇಗೆ ವರ್ಗಾವಣೆ ಆಗುತ್ತೆ? ಯಾರು ಡ್ರಗ್ಸ್ ಕೊಡ್ತಾರೆ? ಈ ಎಲ್ಲ ವಿವರಗಳನ್ನು ನಾವು ಪತ್ತೆ ಹಚ್ಚುವ ಅವಶ್ಯಕತೆ ಇದೆ ಹೀಗಾಗಿ ಆರೋಪಿಗಳನ್ನ ಎನ್ಸಿಬಿ ಕಸ್ಡಡಿಗೆ ನೀಡಿ ಅಂತ ಮನವಿ
- Advertisement -