- Advertisement -
- Advertisement -
ಕಂಬಳಬೆಟ್ಟು: ಬಂಟ್ವಾಳ ತಾಲೂಕು, ವಿಟ್ಲಮುಡ್ನೂರು ಗ್ರಾಮದ ನೂಜಿ ನಿವಾಸಿ ಸೇಸಕ್ಕ ಎಂಬವರಿಗೆ ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲವು ತನ್ನೆಲ್ಲಾ ಸದಸ್ಯರ ಶ್ರಮಸೇವೆ, ಅನುದಾನ ಮತ್ತು ದಾನಿಗಳ ಸಹಕಾರದಿಂದ ನಿರ್ಮಿಸಿದ “ಶ್ರೀ ಸಿದ್ಧಿವಿನಾಯಕ’ ಎಂಬ ಮನೆಯ ಗೃಹಪ್ರವೇಶವು ದಿನಾಂಕ : 28-02-2024ನೇ ಬುಧವಾರ ಪೂರ್ವಾಹ್ನ ಗಂಟೆ 8.10ಕ್ಕೆ ಜರಗಲಿದೆ.
ಗಣಪತಿ ಹವನ, ಭಜನೆ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಗೀತಾ ಗಾಯನ, ಸಭಾ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಅಧ್ಯಕ್ಷರು ಮತ್ತು ಸರ್ವಸದಸ್ಯರು ಸಿದ್ಧಿವಿನಾಯಕ ಯುವಕ ಮಂಡಲ (ರಿ.) ಧರ್ಮನಗರ-ಕಂಬಳಬೆಟ್ಟು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -