Monday, February 10, 2025
spot_imgspot_img
spot_imgspot_img

ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂದಿರದ ನೂತನ ಸಭಾಭವನ ಉದ್ಘಾಟನೆ

- Advertisement -
- Advertisement -

ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂದಿರದ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮ ಅ. 6 ನೇ ಆದಿತ್ಯವಾರ ನಡೆಯಿತು.

ನೂತನ ಸಭಾಭವನವನ್ನು ವೇಣುಗೋಪಾಲ ಶೆಟ್ಟಿ ಮರುವಾಳ, ಅಧ್ಯಕ್ಷರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಕಟ್ನಾಜೆ ಮಾಜಿ ಅಧ್ಯಕ್ಷರು ಶ್ರೀ ಶಾರದಾಂಬ ಭಜನಾ ಮಂಡಳಿ ಅಳಕೆಮಜಲು, ಜಗದೀಶ್‌ ಪೂಜಾರಿ ಅಧ್ಯಕ್ಷರು, ಶ್ರೀ ಶಾರದಾಂಬ ಭಜನಾ ಮಂಡಳಿ ಅಳಕೆಮಜಲು, ರಾಜರಾಮ್‌ ಶೆಟ್ಟಿ ಕೋಲ್ಪೆ ಗುತ್ತು ಗೌರವ ಸಲಹೆಗಾರರು ಶ್ರೀ ಶಾರದಾಂಬ ಭಜನಾ ಮಂಡಳಿ ಅಳಕೆಮಜಲು, ಮಹಿಳಾ ಸಮಿತಿ ಅಧ್ಯಕ್ಷರು ಶ್ರೀಮತಿ ಗೀತಾ, ಪ್ರಧಾನ ಕಾರ್ಯದರ್ಶಿ ತಿರುಮಲೇಶ್ವರ ನಾಯಕ್ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ರಿಶಿಕಾ ಪ್ರಾರ್ಥಿಸಿ ಉಪಾಧ್ಯಕ್ಷ ಭಾಸ್ಕರ್‌ ರೈ ಸ್ವಾಗತಿಸಿದರು. ಸದಸ್ಯ ಉದಯ್‌ ಕುಲಾಲ್‌, ಧನ್ಯವಾದಗೈದು, ಕೋಶಾಧಿಕಾರಿ ಸುಧೀರ್‌ ನಾಯ್ಕ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!