ಹಾಸನ: ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ ದುಷ್ಕೃತ್ಯ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ನಡೆದಿದೆ. ಭವ್ಯ ಸಾವನ್ನಪ್ಪಿದ ದುರ್ದೈವಿ. ಸತೀಶ್ ಎಂಬಾತ ಕಳೆದ ಐದು ವರ್ಷಗಳ ಹಿಂದೆ, ಅರಕಲಗೂಡು ತಾಲೂಕಿನ ಭವ್ಯಾ ಎಂಬಾಕೆಯನ್ನ ಪ್ರೀತಿಸಿದ್ದ . ಭವ್ಯ ಫಸ್ಟ್ ಪಿಯುಸಿ ಓದುವಾಗಲೇ ಪೋಷಕರ ವಿರೋಧದ ನಡುವೆಯೂ ಕಾಲೇಜು ಬಿಟ್ಟು ಕೂಲಿ ಕೆಲಸ ಮಾಡುವವನ ಈಕೆ ಕೈ ಹಿಡಿದಿದ್ದಳು.
ಜೀವನದ ಮೇಲೆ ಸಾಕಷ್ಟು ಕನಸು ಕಂಡಿದ್ದ ಭವ್ಯಾ ದಿನ ಕಳೆದಂತೆ ನರಕಯಾತನೆ ಅನುಭವಿಸಿದ್ದಾಳೆ. ಮದುವೆ ಆದ ಹೊಸದ್ರಲ್ಲಿ ಚೆನ್ನಾಗಿಯೇ ಇದ್ದ ಸತೀಶ್, ನಂತರದ ದಿನಗಳಲ್ಲಿ ಅಸಲಿ ಮುಖ ಕಳಚಿದ್ದ . ಪತ್ನಿ ಮೇಲೆ ಅನುಮಾನ ಪಡಲು ಶುರು ಮಾಡಿದ್ದ . ಅಲ್ಲದೆ, ಪ್ರೀತಿಸಿ ಮದುವೆಯಾದವಳಿಗೆ ಪ್ರತಿದಿನ ಕುಡಿದು ಬಂದು ಕಾಟ ಕೊಡುತ್ತಿದ್ದ .
ಒಂದು ವರ್ಷ ಹೇಗೋ ಸಹಿಸಿಕೊಂಡು ಸಂಸಾರ ಮಾಡಿದ ಭವ್ಯಾ ಒಂದು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗಾಗಿ ಗಂಡನ ಮನೆ ಬಿಟ್ಟು ಹೋಗದೆ ಸಂಸಾರ ನಡೆಸುತ್ತಿದ್ದಳು . ಆದರೆ ಸತೀಶ್ ಹೆಂಡ್ತಿ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ ಅಂತಾ ಕತೆ ಕಟ್ಟಿದ್ದಾನೆ. 26 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಭವ್ಯಾ ಈಗ ಸಾವಿನ ಮನೆ
ಸೇರಿದ್ದಾಳೆ. ತನಿಖೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.