- Advertisement -
- Advertisement -
ಪುತ್ತೂರು: ಹಾಸನ -ಬೆಂಗಳೂರು ಹೈವೆಯಲ್ಲಿ ಬೈಕ್ ಅಪಘಾತ ಸಂಭವಿಸಿ ಕುಂಬ್ರ ಸಮೀಪದ ಗಟ್ಟಮನೆಯ ಆಲಿಕುಂಞಿ ಅವರ ಪುತ್ರ ಬಿಲಾಲ್ ಎಂಬವರು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿಗೆ ಡ್ಯೂಕ್ ಬೈಕ್ ನಲ್ಲಿ ಸ್ನೇಹಿತ ಸರಫ್ ಜೊತೆ ಹೋಗುತ್ತಿದ್ದಾಗ ಹಾಸನ -ಬೆಂಗಳೂರು ಹೈವೆಯ ಕುಣಿಗಲ್ ಸಮೀಪ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡಿದ್ದ ಬಿಲಾಲ್ ಅವರನ್ನು ನೆಲಮಂಗಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಜತೆಗಿದ್ದ ಸರಫ್ ಅವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ.12ರಂದು ರಾತ್ರಿ ಇವರು ಬೆಂಗಳೂರಿಗೆ ಹೊರಟಿರುವುದಾಗಿ ತಿಳಿದು ಬಂದಿದೆ.
- Advertisement -