- Advertisement -
- Advertisement -
ಹಾಸನ: ನಗರದ ಹೊರವಲಯದ ಹನುಮಂತಪುರ ಗ್ರಾಮದಲ್ಲಿ ಮಧ್ಯ ವಯಸ್ಸಿನ ಮಹಿಳೆಯನ್ನು ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಗೌರಮ್ಮ (50) ಮೃತ ಮಹಿಳೆಯ ಗಂಡ ಈ ಹಿಂದೆ ಕೆಎಸ್ ಆರ್ ಟಿಸಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರ ಸಾವಿನ ಬಳಿಕ ಅದೇ ಕೆಲಸ ಮೃತ ಗೌರಮ್ಮನವರ ಮಗನಿಗೆ ದೊರಕಿದೆ. ಗೌರಮ್ಮನವರು ಸಣ್ಣ ಪ್ರಮಾಣದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಯಾವ ವಿಚಾರಕ್ಕಾಗಿ ಕೊಲೆ ಆಗಿದೆ ಎಂಬುದು ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.
- Advertisement -