ಬಂಟ್ವಾಳ:- ಹಿಂದೂ ವ್ಯಕ್ತಿಯೊಬ್ಬ ರನ್ನು ದಬ್ಬಾಳಿಕೆ ಮೂಲಕ ಮತಾಂತರಕ್ಕೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ನಡೆದಿದೆ.
ಹೋಟೆಲ್ ನಲ್ಲಿ ಸಪ್ಲೈ ಕೆಲಸ ಮಾಡುತ್ತಿರುವ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಕರ್ಪೆ ಗ್ರಾಮದ ವಸಂತ ಪೂಜಾರಿಯವರ ಸ್ವಾಮ್ಯ ಸ್ವಭಾವವನ್ನು ದುರ್ಬಳಕೆ ಮಾಡಿಕೊಂಡು ಅನ್ಯ ಧರ್ಮದವರು ಬೆದರಿಕೆ ಹಾಕಿ ಒತ್ತಾಯ ಪುರಕವಾಗಿ ಮತಾಂತರಕ್ಕೆ ಪ್ರಯತಿಸಿದ್ದಾರೆ.ಇದು ಯಾವ ವಿಷಯ ತಿಳಿಯದ ವಸಂತ ಪೂಜಾರಿ ಹಿಂದು ಸಂಘಟನೆಗಳ ಮೊರೆ ಹೋಗಿದ್ದಾರೆ.
ನಾನು ಹಿಂದೂ ಧರ್ಮದವ, ನಾನು ಬೇರೆ ಯಾವ ಧರ್ಮಕ್ಕೆ ಸೇರುವುದಿಲ್ಲ ಎಂದು ಪೂಜಾರಿ ತಿಳಿಸಿದ್ದಾರೆ.ಈಗ ವಸಂತ ಪೂಜಾರಿ ಹಿಂದೂ ಸಂಘಟನೆಗಳ ಮೊರೆ ಹೋಗಿದ್ದು , ಅದಕ್ಕೆ ಹಿಂದೂ ಸಂಘಟನೆ ವಸಂತ ಪೂಜಾರಿಯವರಿಗೆ ಧೈರ್ಯ ತುಂಬಿದ್ದಾರೆ.
ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ ನರಸಿಂಹ ಮಾಣಿ ,ಜಿಲ್ಲಾ ನ್ಯಾಯ ಜಾಗರಣ ಸಂಯೋಜಕ್ ರಾಜೇಶ್ ಬೊಲ್ಲು ಕಲ್ಲ ,ಹಿಂದೂ ಯುವ ವಾಹಿನಿ ಜಿಲ್ಲಾ ಸಂಯೋಜಕ್ ಪ್ರಶಾಂತ್ ಬಂಟ್ವಾಳ, ಬಿಜೆಪಿ ಮುಖಂಡ ಪ್ರಭಾಕರ ಪ್ರಭು ತಿಳಿಸಿದ್ದಾರೆ.