- Advertisement -
- Advertisement -
ಇಬ್ಬರು ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿ ಬಸ್ ಸ್ಟ್ಯಾಂಡ್ ಒಂದರಲ್ಲಿ ಸಲುಗೆಯಾಗಿ ವರ್ತಿಸುತ್ತಿದ್ದ ವೇಳೆ ಸಾರ್ವಜನಿಕರು ವಿಚಾರಿಸಿ, ಅನ್ಯ ಕೋಮಿನ ಮೂವರನ್ನು ಪೊಲೀಸರಿಗೊಪ್ಪಿಸಿದ ಘಟನೆ ಪೆರುವಾಯಿಯಲ್ಲಿ ನಡೆದಿದೆ.
ಕುದ್ದುಪದವು ಬಸ್ಟ್ಯಾಂಡ್ ನಲ್ಲಿ ಇದೇ ರೀತಿ ವರ್ತಿಸುತ್ತಿದ್ದ ಮೂವರ ತಂಡ ಬಸ್ಸಿನಲ್ಲಿ ಬಂದು ಪೆರುವಾಯಿ ಜಂಕ್ಷನ್ನಲ್ಲಿ ಬಂದು ಇಳಿದಿದ್ದಾರೆ. ಈ ವೇಳೆ ಪೆರುವಾಯಿ ಬಸ್ ಸ್ಟ್ಯಾಂಡ್ನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಈ ಜೋಡಿಯನ್ನು ಸಾರ್ವಜನಿಕರು ವಿಚಾರಿಸಿದ್ದು ಈ ಸಂದರ್ಭದಲ್ಲಿ ಈ ಮೂವರು ಕೇರಳ ಮೂಲದವರೆಂದು ಮಾಹಿತಿ ಲಭಿಸಿದೆ.
ವಿಚಾರ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
- Advertisement -