Wednesday, April 24, 2024
spot_imgspot_img
spot_imgspot_img

ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ

- Advertisement -G L Acharya panikkar
- Advertisement -

ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ ಗೊಂಡಿತು.

ವಿಷೇಶವಾಗಿ ಈ ಅಂಬುಲೆನ್ಸ್ ಸಂಘದ ಹಿರಿಯ ಸನ್ಯಾಸಿ ವೆಂಕಟ್ರಮಣ ಹೊಳ್ಳ ಮತ್ತು ಸೇನಾನಿ ಶರತ್ ಮಡಿವಾಳ ಇವರ ಸ್ಮರಣಾರ್ಥ ವಾಗಿ ಲೋಕಾರ್ಪಣೆಗೊಳಿಸಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಭಾಗದ ಸಹ ಕಾರ್ಯವಾಹಕ ಜಗದೀಶ್ ಕಲ್ಲಡ್ಕ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರು ದೀಪ ಪ್ರಜ್ವಲಿಸುವ ಮುಖಾಂತರ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದರು

ಕಾರ್ಯಕ್ರಮ ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಜಿಲ್ಲಾ ಕಾರ್ಯವಾಹ ವಿನೋದ್ ಕೊಡಮನ್, ಶಾರಧ ಗಣಪತಿ ವಿದ್ಯಾ ಕೇಂದ್ರ ಕೈರಂಗಳ ದ ಸಂಚಾಲಕರು ರಾಜ ರಾಮ್ ಭಟ್, ಹಿಂ. ಜಾ. ವೇ. ಪ್ರಾಂತ ಕಾರ್ಯ ಕಾರಿಣಿ ಸದಸ್ಯರು ರವಿರಾಜ್ ಬಿಸಿರೋಡ್, ಹಿಂ. ಜಾ. ವೇ ವಿಭಾಗ ಸಂಪರ್ಕ ಪ್ರಮುಕ್ ರತ್ನಕರ ಶೆಟ್ಟಿ ಕಲ್ಲಡ್ಕ, ಹಿಂ. ಜಾ. ವೇ ಜಿಲ್ಲಾ ಅಧ್ಯಕ್ಷರು ಜಗದೀಶ್ ನೇತ್ರ ಕೆರೆ,

ಭಾರತಿಯ ಜನತಾ ಪಾರ್ಟಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಭಾರತಿಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಹಿಂ. ಜಾ. ವೇ. ಜಿಲ್ಲಾ ಹಿಂದೂ ಯುವ ವಾಹಿನಿ ಸಂಯೋಜಕ್ ಪ್ರಶಾಂತ್ ಕೆಂಪುಗುಡ್ಡೆ, ಹಿಂ.ಜಾ.ವೇ. ಜಿಲ್ಲಾ ಕಾರ್ಯದರ್ಶಿ ಗಳದ ಚಂದ್ರ ಕಲಯಿ, ಬಾಲಕೃಷ್ಣ ಕಲಯಿ,

ಹಿಂ.ಜಾ.ವೇ. ಬಂಟ್ವಾಳ ಅಧ್ಯಕ್ಷರಾದ ತಿರುಲೇಶ್ ಬೆಳ್ಳೋರು, ಹಿಂ.ಜಾ.ವೇ. ಬಂಟ್ವಾಳ ಪ್ರದಾನ ಕಾರ್ಯದರ್ಶಿ ಯೋಗೀಶ್ ತುಂಬೆ, ಮಾತ್ರ್ ಸುರಕ್ಷಾ ಪ್ರಮುಕ್ ಶಿವಪ್ರಸಾದ್ ಧನುಪೂಜೆ, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ದ ಪ್ರದಾನ ಕಾರ್ಯದರ್ಶಿ ಸುರೇಶ ಬೆಂಜನಪದವು, ಹರೀಶ್ ಬಾಂಬಿಲ, ರವಿ ಕೆಂಪುಗುಡ್ಡೆ, ಜಗದೀಶ್ ಕಾಮಜೆ, ಸಚಿನ್ ಬಿಸಿರೋಡ್, ಪರಿವಾರ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಿಂ.ಜಾ.ವೇ. ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಯವರು ಸ್ವಾಗತಿಸಿ, ನಿರೂಪಿಸಿ, ಪ್ರಸ್ಥವಿಕತೆ ಮಾತನಾಡಿದರು. ಈ ನೂತನ ಆಂಬುಲೆನ್ಸ್ ಸಮಾಜದ ಸೇವೆಗೆ ಬಂಟ್ವಾಳದಲ್ಲಿ ಒದಗಲಿದೆ.

- Advertisement -

Related news

error: Content is protected !!