Saturday, April 27, 2024
spot_imgspot_img
spot_imgspot_img

ವನ್ಯಜೀವಿಗಳನ್ನ ಬೇಟೆಯಾಡಿದ ಆರೋಪಿಯ ಬಂಧನ

- Advertisement -G L Acharya panikkar
- Advertisement -

ಶಿವಮೊಗ್ಗ,ನ(12): ವನ್ಯಜೀವಿಗಳನ್ನ ಬೇಟೆಯಾಡಿದ ಆರೋಪಿಯೋರ್ವನನ್ನ ತೀರ್ಥಹಳ್ಳಿ ವನ್ಯಜೀವಿ ಅರಣ್ಯ ಇಲಾಖೆಯವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವನ್ಯಜೀವಿ ಪ್ರಾಣಿಯಾದ ಕಾಡುಹಂದಿಯನ್ನ ಭೇಟೆಯಾಡಿದ್ದ ನಾಗೇಶ್ ನ ಕುರಿತು ಮಾಹಿತಿ ಬಂದ ಮೇರೆಗೆ, ವನ್ಯಜೀವಿ ಅರಣ್ಯ ಇಲಾಖೆಯ ಡಿಸಿಎಫ್ ಐಎಂ ನಾಗರಾಜ ನಿರ್ದೇಶನದ ಮೇರೆಗೆ ಆರ್ ಎಫ್ ಒ ಅಫ್ರಿನಾಜ್ ಶುಂಠಿರವರ ಮಾರ್ಗದರ್ಶನದಲ್ಲಿ ಡಿಆರ್ ಎಫ್ ಒ ಪರಶುರಾಮ ಹುಲಿಮನೆಯ ಕುಮಧ್ವತಿ ಮೀಸಲು ಅರಣ್ಯ ಪ್ರದೇಶವಾದ ವಾಟಗಾರ ಗ್ರಾಮದಲ್ಲಿ ಭೇಟೆಯಾಡಿದ್ದ ನಾಗೇಶನನ್ನ ಬಂಧಿಸಿದ್ದಾರೆ.

ಕಾಡುಹಂದಿಯನ್ನ ಉರುಳಿಹಾಕಿ ಕೊಂದು ನಾಗೇಶ ಮಾಂಸವನ್ನ ತಿಂದಿರುವುದಾಗಿ ತಿಳಿಸಿದ್ದಾನೆ. ಆತನನ್ನ ಬಂಧಿಸಿ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಅರಣ್ಯ ರಕ್ಷಕರಾದ ಪುಟ್ಟಪ್ಪ, ಪಾಂಡುರಂಗ, ಸಚಿನ . ಸಂತೋಷ ವಾಹನ ಚಾಲಕ ಪಾಪೇಶ ಅವರು ಪಾಲ್ಗೊ೦ಡಿದ್ದರು.

- Advertisement -

Related news

error: Content is protected !!