- Advertisement -
- Advertisement -
ಬಂಟ್ವಾಳ : ಅವರ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮ ನಿವಾಸಿ ವಸಂತ ಸಾಲಿಯಾನ್ ಅವರ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕಳವುಗೊಂಡೆದ್ದು,
ಆರೋಪಿ ಪುಷ್ಪಲತಾ ಹಾಗೂ ಇತರ ಕೆಲಸಗಾರರು ಶುಕ್ರವಾರ ರಾತ್ರಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಮರದಿಂದ ಸುಮಾರು 4-5 ಕ್ವಿಂಟಾಲ್ ಅಡಿಕೆ ಕೊಯ್ದು ಕದ್ದುಕೊಂಡು ಹೋಗಿದ್ದಾರೆ. ವಸಂತ ಸಾಲಿಯಾನ್ ಅವರ ಮನೆ ಜಮೀನಿಗೆ ಸ್ವಲ್ಪ ದೂರದಲ್ಲಿರುವುದರಿಂದ ಆರೋಪಿಗಳು ಇದನ್ನು ಸದುಪಯೋಗಪಡಿಸಿಕೊಂಡು ಕಳವು ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಡಿಕೆ ಕಳ್ಳತನದಿಂದ ತೋಟದ ಮಾಲಿಕ ವಸಂತ ಸಾಲಿಯಾನ್ ಅವರಿಗೆ ಸುಮಾರು 2.5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2023 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- Advertisement -