- Advertisement -
- Advertisement -
ಶ್ರೀನಗರ: ಭಾರತ-ಪಾಕಿಸ್ತಾನದ ಗಡಿ ಪ್ರದೇಶವಾದ ಜಮ್ಮು ಕಾಶ್ಮೀರದ ನಿಯಂತ್ರಣ ರೇಖೆ (ಎಲ್ಒಸಿ) ಬಳಿಯಲ್ಲಿರುವ ಪಾಕಿಸ್ತಾನದ ಐಎಸ್ಐ ಪೋಷಿತ ಉಗ್ರರು ಭಾರತದೊಳಗೆ ನುಸುಳಲು ಸಂಚು ರೂಪಿಸುತ್ತಿದ್ದಾರೆ.
ಸುಮಾರು140 ಉಗ್ರರು ಭಾರತ ಗಡಿಯೊಳಗೆ ನುಸುಳಲು ಹೊಂಚು ಹಾಕಿ ಕುಳಿತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಎಸ್ಎಫ್ ಯೋಧರು ಗಡಿಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಹೇರುತ್ತಿರುವ ಕಾರಣ ಉಗ್ರರು ಕಾಶ್ಮೀರಕ್ಕೆ ನುಸುಳಲು ಪರದಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮೂರನೇ ಅಲೆ ಆತಂಕ; ಕಳೆದ 24 ಗಂಟೆಯಲ್ಲಿ 44,643 ಹೊಸ ಪ್ರಕರಣ ಪತ್ತೆ!
ಭಾರತೀಯ ಯೋಧರು ಉಗ್ರರ ನುಸುಳುವಿಕೆಯ ಹಲವು ಯತ್ನಗಳನ್ನು ವಿಫಲಗೊಳಿಸಿದ್ದಾರೆ. ಎರಡು ವರ್ಷಗಳ ಹಿಂದೆ 370ನೇ ವಿಧಿಯನ್ನು ಕೇಂದ್ರ ಸರಕಾರವು ರದ್ದುಗೊಳಿಸಿದ ಪರಿಣಾಮವಾಗಿ ಕಣಿವೆಯಲ್ಲಿ ಉಗ್ರರ ಒಳ ನುಸುಳುವಿಕೆ ಭಾರಿ ಕಡಿಮೆಯಾಗಿದೆ.
- Advertisement -