- Advertisement -
- Advertisement -
ನವದೆಹಲಿ: ಅಹಮದಾಬಾದ್ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಮಾ.12ರಂದು ಪ್ರಧಾನಿ ಮೋದಿ ಚಾಲನೆ ನೀಡಿದರು. ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಮೋದಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಈ ಮಹೋತ್ಸವ 15 ಆಗಸ್ಟ್ 2022 ರ ಸ್ವಾತಂತ್ರ್ಯೋತ್ಸವದ 75 ವಾರ ಮುನ್ನ ಪ್ರಾರಂಭವಾಗಿದೆ. 2023 ರ ಆಗಸ್ಟ್ 15 ರವರೆಗೆ ಈ ಮಹೋತ್ಸವವನ್ನ ನಡೆಸುತ್ತೇವೆ.
ಸ್ವಾತಂತ್ರ್ಯದ ಸಂಗ್ರಾಮ, 75 ಐಡಿಯಾಗಳು, 75 ಸಾಧನೆಗಳು, ಮತ್ತು 75 ಪರಿಹಾರಗಳು ಈ ಐದು ಕಂಬಗಳು ದೇಶ ಮುನ್ನಡೆಯಲು ಸ್ಫೂರ್ತಿಯಾಗುತ್ತವೆ ಎಂದು ಮೋದಿ ಹೇಳಿದರು.
ದೇಶ ಲೋಕಮಾನ್ಯ ತಿಲಕ್ ಅವರ ಪೂರ್ಣ ಸ್ವರಾಜ್ಯ, ಆಜಾದ್ ಹಿಂದ್ ಫೌಜ್ರ ದೆಲ್ಲಿ ಚಲೋ, ಕ್ವಿಟ್ ಇಂಡಿಯಾ ಚಳವಳಿಗಳನ್ನ ಎಂದಿಗೂ ಮರೆಯೋದಿಲ್ಲ. ನಾವು ಮಂಗಲ್ ಪಾಂಡೆ, ತಾತ್ಯಾ ಟೋಪಿ, ರಾಣಿ ಲಕ್ಷ್ಮೀ ಬಾಯಿ, ಚಂದ್ರಶೆಖರ್ ಆಜಾದ್, ಭಗತ್ ಸಿಂಗ್, ಪಂಡಿತ್ ನೆಹರೂ ಸರ್ದಾರ್ ಪಟೇಲ್, ಅಂಬೇಡ್ಕರ್ರಿಂದ ಸ್ಫೂರ್ತಿ ಪಡೆಯುತ್ತೇವೆ ಎಂದರು.
- Advertisement -