- Advertisement -
- Advertisement -
ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ , ಅಣ್ಣಾಮಲೈ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಅಣ್ಣಾಮಲೈ, ಕರ್ನಾಟಕ ಜನತೆಗೆ ಋಣಿಯಾಗಿರುತ್ತೇನೆ.
ಪ್ರಧಾನಮಂತ್ರಿ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕೈ ಗಟ್ಟಿ ಮಾಡಬೇಕು. ನಾನು ಬಿಜೆಪಿ ಸೇರಲು 1 ವರ್ಷದಿಂದ ಕಾಯುತ್ತಿದ್ದೆ.
ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ಆಗಬೇಕು. ತಮಿಳುನಾಡಿನಲ್ಲಿ ಉತ್ತಮ ಕೆಲಸ ಮಾಡುತ್ತೇನೆ ಎಂದರು.
Former IPS officer K. Annamalai joins BJP in presence of Shri @PMuralidharRao and Shri @Murugan_TNBJP at BJP headquarters in New Delhi. pic.twitter.com/42HIh2TqWl
— BJP (@BJP4India) August 25, 2020
- Advertisement -