Tuesday, May 7, 2024
spot_imgspot_img
spot_imgspot_img

ವಿಟ್ಲ: (ಜ.1) ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಅರಸು ಮುಂಡಲತ್ತಾಯ ಹಾಗೂ ನಾಗದೇವರ ಸಾನಿಧ್ಯ ದೇವಸ್ಯ ದಲ್ಲಿ ನಾಗದೇವರ ಮತ್ತು ದೈವದ ಪ್ರತಿಷ್ಠಾ ದಿನ ಹಾಗೂ ಆನೆಚಪ್ಪರದ ಲೋಕಾರ್ಪಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಅರಸು ಮುಂಡಲತ್ತಾಯ ಹಾಗೂ ನಾಗದೇವರ ಸಾನಿಧ್ಯ ದೇವಸ್ಯ ದಲ್ಲಿ ದಿನಾಂಕ 01-01-2024 ರಂದು ನಾಗದೇವರ ಮತ್ತು ದೈವದ ಪ್ರತಿಷ್ಠಾ ದಿನ ಹಾಗೂ ಆನೆಚಪ್ಪರದ ಲೋಕಾರ್ಪಣೆ ಕಾರ್ಯಕ್ರಮವು ಜರಗಲಿದೆ.

ಈ ಸಮಾರಂಭದ ಸಭಾಕಾರ್ಯಕ್ರಮವು ಮನೋಹರ ಶೆಟ್ಟಿ, ವಿಟ್ಲ ಹೊಸಮನೆ ಚೆಕ್ಕಿದಡಿ ಇವರ ಸಭಾಧ್ಯಕ್ಷತೆಯಲ್ಲಿ ಹಾಗೂ ಬಂಗಾರು ಅರಸರು, ಅರಮನೆ, ವಿಟ್ಲ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ. ವೇದಿಕೆಯಲ್ಲಿ ಶ್ರೀಕೃಷ್ಣ ಗುರೂಜಿ ಧರ್ಮದರ್ಶಿಗಳು ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಕುಕ್ಕಾಜೆ, ಮಾಣಿಲ ಇವರು ಆಶೀವರ್ಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ರೈ ಕುಂಡಕೋಳಿ ಸೀಮೆಗುರಿಕಾರರು, ಹೆಚ್. ಜಗನ್ನಾಥ ಸಾಲಿಯಾನ್, ಜಿತೇಶ್ ಜೈನ್, ಮಂಗಳೂರು ಭಾಗವಹಿಸಲಿದ್ದಾರೆ.

01-01-2024ನೇ ಸೋಮವಾರ ಬೆಳಿಗ್ಗೆ 7.30ಕ್ಕೆ ನಾಗಬನದಲ್ಲಿ ತಂಬಿಲ ಸೇವೆ, ಕಲಶಾಭಿಷೇಕ ನಡೆಯಲಿರುವುದು. ಗಂಟೆ 9.30ಕ್ಕೆ ಅರಸ ಮುಂಡಲತ್ತಾಯ ದೈವಸ್ಥಾನದಲ್ಲಿ ಕಲಶ, ತಂಬಿಲ ಸೇವೆ, ಮಹಾಪೂಜೆ ನಂತರ ಪ್ರಸಾದ ವಿತರಣೆ ಜರಗಲಿದೆ. ಸಮಯ 11.30ಕ್ಕೆ ಸಭಾಕಾರ್ಯಕ್ರಮ ನಂತರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರಗಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!