ವಿಟ್ಲ: ಹಳೇ ವೈಷಮ್ಯದ ಹಿನ್ನಲೆ ಬಾರ್ & ರೆಸ್ಟೋರೆಂಟ್’ನ ಮಾಲೀಕನಿಗೆ ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಾಗೂ ಹಲ್ಲೆ ಯತ್ನ ನಡೆಸಿದ ಘಟನೆ ಜನವರಿ. 20 ರಂದು ಕಬಕದ ಕುಳದಲ್ಲಿ ನಡೆದಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಗೀತಾ ಬಾರ್ & ರೆಸ್ಟೋರೆಂಟ್’ನ ಮಾಲಿಕ ರಾಮಣ್ಣ ಪೂಜಾರಿ ದೂರು ನೀಡಿದ್ದಾರೆ.
ಗೀತಾ ಬಾರ್ & ರೆಸ್ಟೋರೆಂಟ್’ನವರು ತಮ್ಮ ಸಿಬ್ಬಂದಿಗಳ ಮೇಲೆ ಹಾಗೂ ಅಂಗಡಿಗೆ ಬಂದು ದಾಂಧಲೆ ಮಾಡಿ, ರಾತ್ರಿ ವೇಳೆ ಹಲ್ಲೆಗೆ ಯತ್ನಿಸಿದ್ದಾರೆಂದು ಬಾರ್ ಮಾಲೀಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾರ್’ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುವ ಸಮಯದಲ್ಲಿ ದಾರಿಗೆ ಅಡ್ಡಲಾಗಿ ನಿಂತು ರಮೇಶ್ ಗೌಡ ಮತ್ತು ದರ್ಣಪ್ಪ ಗೌಡ ಹಾಗೂ ಅವರೊಂದಿಗೆ ಬಂದ ಮೂವರು ಅವಾಚ್ಯ ಶಬ್ಧಗಳಿನಿಂದ ನಿಂದಿಸಿ ಮೈಮೇಲೆ ಕೈ ಮಾಡಿರುತ್ತಾರೆ. ಇದಕ್ಕಿಂತ ಎರಡು ದಿನಗಳ ಹಿಂದೆ ಬಾರ್’ಗೆ ಬಂದು ಬಾರ್’ನ ಕ್ಯಾಬಿನ್ ಪುಡಿ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಂದು ವರ್ಷದ ಹಿಂದೆ ಬಾರ್ & ರೆಸ್ಟೋರೆಂಟ್ ಹಾಗೂ ಗ್ಲಾಸ್ & ಹಾರ್ಡ್’ವೇರ್ ಶಾಪ್ ನವರ ನಡುವೆ ಗಲಾಟೆ ನಡೆದಿತ್ತು. ನಂತರ ಪೊಲೀಸ್ ಠಾಣೆಯಲ್ಲಿ ಬಾರ್ ಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆದಿದ್ದಾರೆ. ಈ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಗಿಯದ ಆರೋಪ – ಪ್ರತ್ಯಾರೋಪ
ಗೀತಾ ಬಾರ್ & ರೆಸ್ಟೋರೆಂಟ್’ನವರು ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದಾರೆಂದು ಯಾರೋ ನೀಡಿದ ದೂರಿಗೆ ಗ್ಲಾಸ್ & ಹಾರ್ಡ್’ವೇರ್ ಅಂಗಡಿಯ ಗ್ಲಾಸ್ ಬಾಕ್ಸ್’ಗಳನ್ನು ಪುಡಿ ಮಾಡಿದ್ದಾರೆಂದು ರಮೇಶ್ ಗೌಡ ದೂರು ನೀಡಿದ್ದರು.