- Advertisement -
- Advertisement -
ಪುತ್ತೂರು: ಕಬಕ ಅಡ್ಯಾರಗೋಳಿ ಶ್ರೀ ಅಡ್ಯಲಾಯ ಹಾಗೂ ಪರಿವಾರ ದೈವಗಳ ಸನ್ನಿದಿಯಲ್ಲಿ ನಡೆದ ವಾರ್ಷಿಕ ನೇಮೋತ್ಸವ, ನಾಗದರ್ಶಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಹೂವಿನ ಅಲಂಕಾರ ಮಾಡಿ ದ ಮೈಸೂರಿನ ಎಸ್.ಎಲ್.ವಿ. ಗ್ರೂಪ್ ನ ಮಾಲಕರಾದ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರನ್ನು ನೇಮೋತ್ಸವದ ಸಂದರ್ಭದಲ್ಲಿ ಗೌರವಿಸಲಾಯಿತು.
ವೇ.ಮೂ ಶ್ರೀಧರ ಭಟ್ ಕಬಕ, ದೈವಸ್ಥಾನದ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಸಹಿತ ಸಮಿತಿಯ ಹಲವು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Advertisement -