ವಿಟ್ಲ: ಮೋಟಾರ್ ಸೈಕಲ್ನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಮೋಟಾರ್ ಸೈಕಲ್ಗೆ ಅಪಘಾತಗೊಳಿಸಿದ ಘಟನೆ , ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಮಂಡಿಯೂರು ಬಳಿ ನಡೆದಿದೆ.
ಚಿಪ್ಪಾರ್ ಅಂಚೆ, ಬಾಯಾರು ಗ್ರಾಮ, ಮಂಜೇಶ್ವರ ತಾಲೂಕು ಕೇರಳ ನಿವಾಸಿ ಕಿಶನ್ ಕೆ ಎಂಬವರ ದೂರಿನಂತೆ ಇವರು ತಮ್ಮ ಮೋಟಾರ್ ಸೈಕಲ್ನಲ್ಲಿ, ಕನ್ಯಾನ-ಬಾಯಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಮಂಡಿಯೂರು ಬಳಿ ತಲುಪಿದಾಗ, ಎದುರಿನಿಂದ KA-70-H-8962ನೇ ಮೋಟಾರ್ ಸೈಕಲ್ನ್ನು ಅದರ ಸವಾರ ರಮೇಶ್ ನಾಯಕ್ ರವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಕಿಶನ್ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಗೆ ಅಪಘಾತಪಡಿಸಿರುತ್ತಾರೆ. ಪರಿಣಾಮ ಎರಡೂ ವಾಹನಗಳ ಸವಾರರು ರಸ್ತೆಗೆ ಬಿದ್ದು, ಸವಾರರಿಗೆ ಗಾಯಗೊಂಡಿರುತ್ತಾರೆ. ಕಿಶನ್ ಅವರನ್ನು ಚಿಕಿತ್ಸೆಗಾಗಿ ಉಪ್ಪಳದ ಕೆ.ಎನ್.ಹೆಚ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 77/2024 ಕಲಂ: 279,337 IPC ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.