ಕರೆಂಕಿ: ಕರೆಂಕಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವವು ಫೆ. 12 ರಿಂದ ಫೆ. 17ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಧರ್ಣಪ್ಪ ಪೂಜಾರಿ ರಾಮನಗರ, ಉಪಾಧ್ಯಕ್ಷರಾದ ಕೃಷ್ಣ ಟಿ. ಕನಪಾದೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಶೆಟ್ಟಿ ದಂಡೆ, ಉಪಾಧ್ಯಕ್ಷರುಗಳಾದ ಕರುಣೇಂದ್ರ ಪೂಜಾರಿ ಕೊಂಬ್ರಬೈಲ್, ಶ್ರೀಮತಿ ವಿಲಾಸಿನಿ ಶಾಂತವೀರ ಫರ್ಲಾ, ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಗೌಡ ಕರೆಂಕಿ, ಉಪಾಧ್ಯಕ್ಷರಾದ ಪೂವಪ್ಪ ಮೆಂಡನ್ ಕರೆಂಕಿ, ವಿಠಲ ಡಿ.
ಕಾರ್ಯದರ್ಶಿ ಮನೋಜ್ ಕುಮಾರ್ ಕರೆಂಕಿ, ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹರ್ಷಿತಾ ಕರೆಂಕಿ, ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕರೆಂಕಿ ಹಾಗೂ ಪ್ರಚಾರ ಸಮಿತಿಯ ಸಂಚಾಲಕರಾದ ಮನ್ಮಥ ಜೆ ಶೆಟ್ಟಿ, ಹಾಗೂ ಚೇತನಾ ಆರ್. ಶೆಟ್ಟಿ ದಂಡೆ, ಆನಂದ ಕರೆಂಕಿ, ಗಣೇಶ್ ಗೌಡ ಕರೆಂಕಿ, ಸಂತೋಷ್ ದಾಸರಕೋಡಿ, ನವೀನ್ ಕುಲಾಲ್,ಧನುಷ್ ಟಿ. ಕರೆಂಕಿ, ಧನ್ ರಾಜ್ ಕರೆಂಕಿ, ಅವಿನಾಶ್ ಕರೆಂಕಿ, ಶ್ರೀಮತಿ ಚಿನ್ನಮ್ಮ, ಶ್ರೀಮತಿ ಯೋಗಿನಿ , ಶ್ರೀಮತಿ ಮೀನಾಕ್ಷಿ ಮಣಿ ಉಪಸ್ಥಿತರಿದ್ದರು.