Sunday, May 5, 2024
spot_imgspot_img
spot_imgspot_img

ಕಾರ್ಕಳ : ತಾಯಿಯ ನಿಧನದಿಂದ ಆಘಾತಗೊಂಡ ಮಗಳು ಕೆರೆಗೆ ಹಾರಿ ಆತ್ಮಹತ್ಯೆ..!!

- Advertisement -G L Acharya panikkar
- Advertisement -
vtv vitla

ಕಾರ್ಕಳ: ತಾಯಿಯ ಅಕಾಲಿಕ ನಿಧನದ ಸುದ್ದಿ ತಿಳಿದು ಆಘಾತಗೊಂಡ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಈದು ನೂರಾಲ್ ಬೆಟ್ಟು ಕಜೆ ಎಂಬಲ್ಲಿ ಸಂಭವಿಸಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ 65 ವರ್ಷ ಪ್ರಾಯದ ಭಾಗಿ ಎಂಬವರು ಮನೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಆಕೆಯ ಮಗಳು 25 ವರ್ಷ ಪ್ರಾಯದ ರೇಖಾ ಎಂದಿನಂತೆ ನಾರಾವಿಯ ಫ್ಯಾನ್ಸಿ ಅಂಗಡಿಯ ಕೆಲಸಕ್ಕೆಂದು ಹೊರಟು ಹೋಗಿದ್ದಳು. ಅಂಗಡಿಯಲ್ಲಿದ್ದ ಆಕೆಗೆ ಪರಿಚಯಸ್ಥರೊಬ್ಬರು ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ , ಮನೆಗೆ ಬಾ ಎಂದು ಹೇಳಿದ್ದರು.

ಅಸೌಖ್ಯದಿಂದ ಇದ್ದ ತಾಯಿಗೆ ಏನೋ ಆಗಿರಬೇಕು ಪ್ರಶ್ನೆಯ ನಡುವೆ ತಾಯಿ ಮೃತಪಟ್ಟಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೆಲಸದಿಂದ ಹಿಂತಿರುಗಿದ್ದ ರೇಖಾ ಮನೆಗೆ ಹೋಗುವ ಮುನ್ನವೇ ಮನೆ ಸಮೀಪದ ಕೆರೆಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬಂದಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

- Advertisement -

Related news

error: Content is protected !!