Saturday, May 4, 2024
spot_imgspot_img
spot_imgspot_img

ಕಾಸರಗೋಡು : ಕಟ್ಟಡದಿಂದ ಬಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು

- Advertisement -G L Acharya panikkar
- Advertisement -

ಕಾಸರಗೋಡು : ಕಟ್ಟಡದಿಂದ ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪೈವಳಿಕೆ ಅಟ್ಟೆಗೋಳಿಯ ಬ್ಯಾಪ್ಟಿಸ್ಟ್ ಕ್ರಾಸ್ತ (59) ಮೃತಪಟ್ಟವರು.

ಅಟ್ಟೆಗೋಳಿಯ ಕಟ್ಟಡವೊಂದರ ಕೆಳಗೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಬ್ಯಾಪ್ಟಿಸ್ಟ್ ಕ್ರಾಸ್ತರನ್ನು ಅದೇ ದಾರಿಯಾಗಿ ಬಂದ ಪೊಲೀಸರು ಮಂಗಲ್ಪಾಡಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ತಲಪಿಸಿದ್ದರು. ಆದರೆ ಸ್ಥಿತಿ ಗಂಭೀರವಾದುದರಿಂದ ಕಾಸರಗೋಡಿಗೆ ಕೊಂಡೊಯ್ದು ಅಲ್ಲಿಂದ ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬ್ಯಾಪ್ಟಿಸ್ಟ್ ಕ್ರಾಸ್ತ ಅವಿವಾಹಿತರಾಗಿದ್ದು, ಈ ಹಿಂದೆ ಬಸ್ಸು ಕ್ಲೀನರ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!