Monday, May 13, 2024
spot_imgspot_img
spot_imgspot_img

ಕಾಸರಗೋಡು: ಲಾಡ್ಜ್‌ನಲ್ಲಿ ಯುವತಿಯ ಭೀಕರ ಹತ್ಯೆ; ಮದುವೆ ಒತ್ತಡಕ್ಕೆ ನೊಂದು ಕೊಲೆ

- Advertisement -G L Acharya panikkar
- Advertisement -

ಕಾಸರಗೋಡು: ಲಾಡ್ಜ್‌ವೊಂದರಲ್ಲಿ ಯುವತಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೋವಿಕಾನಂ ಅಮ್ಮನಕೋಟೆ ಸತೀಶ್ ಭಾಸ್ಕರಿ (34) ಎಂದು ಗುರುತಿಸಲಾಗಿದೆ. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ದೇವಿಕಾ ಅವರನ್ನು ಮಂಗಳವಾರ ಲಾಡ್ಜ್ ಕೊಠಡಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು.

ಉದುಮ ಕುಂಡೋಲಂಪಾರದ ಲಾಡ್ಜ್‌ವೊಂದರಲ್ಲಿ ದೇವಿಕಾಳನ್ನು ಕೊಲೆ ಮಾಡಲಾಗಿತ್ತು. ಕೊಲೆಗೈದ ಪ್ರಕರಣದ ಆರೋಪಿ ಸತೀಶ್ ಭಾಸ್ಕರಿಗೆ ನ್ಯಾಯಾಲಯ ಎರಡು ವಾರಗಳ ಕಾಲ ರಿಮಾಂಡ್ ವಿಧಿಸಿದೆ. ಕಣ್ಣೂರು ಸರಕಾರ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ದೇವಿಕಾ ಅವರ ಮೃತದೇಹವನ್ನು ಉದುಮದಲ್ಲಿರುವ ಮನೆಗೆ ತಂದು ಅಪಾರ ಜನಸ್ತೋಮದ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಇದೇ ವೇಳೆ ಕೊಲೆ ನಡೆದ ಕೊಠಡಿಯಿಂದ ಪೊಲೀಸರು ಮತ್ತೆರಡು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೆರಡು ಚಾಕುಗಳು ಪೊಲೀಸ್ ಠಾಣೆಗೆ ಬಂದು ಆರೋಪಿ ಶರಣಾಗುವಾಗ ವನ ಕೈಯಲ್ಲಿದ್ದ ಚಾಕು ಒಂದೇ ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕೊಲೆ ಹಿಂದಿದೆ ಮದುವೆ ಒತ್ತಡ..!
ವಿಚಾರಣೆ ವೇಳೆ ಬಾಯಿಬಿಟ್ಟಿರುವ ಸತೀಶ್‌ ದೇವಿಕಾಳನ್ನು ಪ್ರೀತಿಸುತ್ತಿದ್ದೆ ಎಂದಿದ್ದಾನೆ. ಈಗಾಗಲೇ ಸತೀಶ್‌ಗೆ ಮದುವೆ ಆಗಿ ಮಗು ಸಹ ಇದೆ. ಆದರೆ ದೇವಿಕಾ ಹೆಂಡತಿ ಮಕ್ಕಳನ್ನು ಬಿಟ್ಟು ನನ್ನನ್ನು ಮದುವೆಯಾಗಬೇಕು ಎಂಬ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಸತೀಶ್ ಕೊಲೆ ಮಾಡಲು ನಿರ್ಧರಿಸಿದ್ದ. ದೇವಿಕಾಳಿಗೂ ಇಬ್ಬರು ಮಕ್ಕಳಿದ್ದಾರೆ. ಪತ್ನಿಯೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ದೇವಿಕಾ ಸತೀಶ್ ಗೆ ನಿರಂತರವಾಗಿ ಒತ್ತಾಯಿಸುತ್ತಿದ್ದಳು ಎಂದು ವರದಿಯಾಗಿದೆ. ಇದರಿಂದ ಸತೀಶ್ ಮಾನಸಿಕವಾಗಿ ನೊಂದಿದ್ದ. ಈ ಕಾರಣದಿಂದಲೇ ಕೊಲೆ ಮಾಡಲು ನಿರ್ಧರಿಸಿದ್ದ. ಈ ಸಂಬಂಧ ಸತೀಶ್ ಮನೆಯಲ್ಲಿ ಸಮಸ್ಯೆಗಳು ನಡೆಯುತ್ತಿದ್ದವು. ಅದಕ್ಕಾಗಿಯೇ ಕಳೆದ 15 ದಿನಗಳಿಂದ ಲಾಡ್ಜ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ದಿನ ಸತೀಶ್ ಮಹಿಳೆಯನ್ನು ಹೋಟೆಲ್ ಗೆ ಕರೆಸಿಕೊಂಡಿದ್ದ. ಭವಿಷ್ಯದ ವಿಚಾರಗಳನ್ನು ನಿರ್ಧರಿಸಬಹುದು ಎಂದು ಯುವತಿಯನ್ನು ಹೋಟೆಲ್‌ಗೆ ಕರೆದಿದ್ದಾರೆ.ದೇವಿಕಾಳನ್ನು ಹೋಟೆಲ್ ನ 306ನೇ ಕೊಠಡಿಗೆ ಕರೆತಂದ ಬಳಿಕ ಮಾತನಾಡುವಾಗ ಮಾತಿನ ಚಕಮಕಿ ನಡೆದು ನಂತರ ಆಕೆಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

- Advertisement -

Related news

error: Content is protected !!