Wednesday, May 8, 2024
spot_imgspot_img
spot_imgspot_img

ಕಾಸರಗೋಡು: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

- Advertisement -G L Acharya panikkar
- Advertisement -

ಕಾಸರಗೋಡು: ನದಿಗೆ ಸ್ನಾನ ಮಾಡಲು ಹೋಗಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ರಶೀದ್ (15) ಮೃತ ದುರ್ದೈವಿಯಾಗಿದ್ದಾರೆ.

ಉದುಮ ಪಾಕ್ಯಾರ ಮಜೀದ್ ಎಂಬವರ ಪುತ್ರ ರಶೀದ್ ತನ್ನ ಸ್ನೇಹಿತರೊಂದಿಗೆ ಪಾಲಕುನ್ ಕಪ್ಪಿಲ್ ಕೋಡಿಕಡಪುರಂನ ಅಳಿವೆಯಲ್ಲಿ ಸ್ನಾನ ಮಾಡಲು ತೆರಳಿದ್ದಾನೆ. ಈ ಸಂದರ್ಭ ನೀರಿಗೆ ಇಳಿದ ರಶೀದ್ ನೀರಿನಲ್ಲಿ ಮುಳುಗಿ ದಾರುಣ ಅಂತ್ಯವನ್ನು ಕಂಡಿದ್ದಾನೆ.

ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳಿ ಅಗ್ನಿಶಾಮಕದಳದ ನೆರವಿನಿಂದ ಯುವಕನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

- Advertisement -

Related news

error: Content is protected !!