- Advertisement -
- Advertisement -
ಕಾಸರಗೋಡು: ಮೀನುಗಾರಿಕೆಯ ಸಂದರ್ಭದಲ್ಲಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತ ಪಶ್ಚಿಮ ಬಂಗಾಳ ನಿವಾಸಿ ಜಯದೀಪ್ ಅವರ ಮೃತದೇಹ ಪತ್ತೆಯಾಗಿದೆ. ನ.23 ರಂದು ರಾತ್ರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ನೀಲೇಶ್ವರದ ಕೊಯಂಬುರದ ರಾಜೀವ್ ಅವರ ಮಾಲಕತ್ವದಲ್ಲಿರುವ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಕಾಸರಗೋಡು ಫಿಶರೀಸ್ ರೆಸ್ಕೂ ಬೋಟ್ ಹಾಗು ಮಡಕರದ ಮೀನುಗಾರಿಕೆ ಕಾರ್ಮಿಕರು ಸಂಯುಕ್ತವಾಗಿ ಶೋಧ ನಡೆಸುತ್ತಿದ್ದಾಗ ಕಾಂಞಂಗಾಡ್ ಚಿತ್ತಾರಿ ಕಡಪ್ಪುರದಲ್ಲಿ ಮೃತದೇಹ ಪತ್ತೆಯಾಯಿತು.
- Advertisement -