- Advertisement -
- Advertisement -
ಕೇರಳ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ಕೇರಳದ ಚೆಂಪಲ್ಲಿಕುಂದ ಸೇತುವೆ ಬಳಿ ನಡೆದಿದೆ.
ಮೃತಪಟ್ಟವರನ್ನು ಮುತ್ತಂ ಅಂಗಡಿ ಮೂಲದ ಕೊಟ್ಟಕರ ರಿಯಾಝ್ (33) ಎಂದು ಗುರುತಿಸಲಾಗಿದೆ.
ಕೊವ್ವಪುರದಿಂದ ಮುತ್ತಂಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಕೂಡಲೇ ಸ್ಥಳೀಯರು ಆತನನ್ನು ಕಣ್ಣೂರು ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗಿನ ಜಾವ ಮೃತಪ್ಟಿದ್ದಾರೆ. ಮುತ್ತದ ದಿವಂಗತ ಕೆ.ಪಿ.ಅಸಿನಾರ್ ಮತ್ತು ವಲಿಯಕತ್ ಮರಿಯಮ್ ದಂಪತಿಯ ಏಕೈಕ ಪುತ್ರ ರಿಯಾಝ್. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಅವರನ್ನು ಸಂಬಂಧಿಕರಿಗೆ ಬಿಡುಗಡೆ ಮಾಡಲಾಗಿದೆ.
- Advertisement -