Saturday, April 27, 2024
spot_imgspot_img
spot_imgspot_img

ಮನೆಯಲ್ಲಿದ್ದ ಚಿನ್ನಾಭರಣ ಕಳವು..! ಪೊಲೀಸ್ ವಿಚಾರಣೆ ವೇಳೆ ಮಗಳು ಬಾಯ್ಬಿಟ್ಟ ಸತ್ಯ ಕೇಳಿ ಪೋಷಕರು ಕಂಗಾಲು!

- Advertisement -G L Acharya panikkar
- Advertisement -

ಹಿಂದೂ ಎಂದು ಹೇಳಿಕೊಂಡು ಪ್ರೀತಿಯ ನಾಟಕವಾಡಿದ್ದ ಮುಸ್ಲಿಂ ಯುವಕ..!
ಆಶಿನ್‌ಗೆ ಪರಿಚಯಸಿದ ತಾಹಿರ್‌..! ಇಬ್ಬರಿಂದಲೂ ಲೈಂಗಿಕ ಕಿರುಕುಳ

ಹಿಂದೂ ಯುವಕನೆಂದು ಪರಿಚಯ ಮಾಡಿಕೊಂಡು ಪ್ರೀತಿಸಿ, ಅಪ್ರಾಪ್ತೆಯನ್ನು ಅತ್ಯಾಚಾರಗೈದು ಆಕೆಯಿಂದ ಚಿನ್ನದ ಆಭರಣಗಳನ್ನು ದೋಚಿದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಯುವತಿಯನ್ನು ಪ್ರೀತಿಸುವಂತೆ ನಾಟಕವಾಡಿ ಬಳಿಕ ತನ್ನ ಗೆಳೆಯ ಆಶಿನ್ ಎಂಬಾತನ ಜೊತೆ ಸೇರಿ ಕಿರುಕುಳ ನೀಡಿದ್ದಾಗಿ ಯುವತಿ ವಿಚಾರಣೆ ವೇಳೆ ತ್ಯ ಬಾಯ್ಬಿಟ್ಟಿದ್ದಾಳೆ.

ಕೊಚ್ಚಿ: ಪ್ರೀತಿಸುವಂತೆ ನಟಿಸಿ ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ನೀಡಿ ಚಿನ್ನಾಭರಣಕ್ಕೆ ಬೆದರಿಸಿದ್ದ ವಯನಾಡಿನ ಬತೇರಿಯ ತಾಹಿರ್ ಮತ್ತು ಕಣ್ಣೂರಿನ ಥಳಿಪರಮ್‌ನ ಆಶಿನ್ ಥಾಮಸ್ ಎಂಬುವರನ್ನು ಬಂಧಿಸಲಾಗಿದೆ. ಕಳೆದ ದಿನ ಮನೆಯಲ್ಲಿದ್ದ ಎರಡು ಉಂಗುರಗಳು ಹಾಗೂ ಒಂದು ನೆಕ್ಲೇಸ್ ನಾಪತ್ತೆಯಾಗಿದೆ ಎಂದು ದಂಪತಿ ಮುಳವುಕಾಡ್ ಠಾಣೆಗೆ ಆಗಮಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಪೊಲೀಸರಿಗೆ ಚಿನ್ನಾಭರಣ ಕಳ್ಳತನದ ಹಿಂದಿನ ಅಸಲಿ ಸತ್ಯ ತಿಳಿದುಬಂದಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಅನುಮಾನಗೊಂಡ ಪೊಲೀಸ್ ತನಿಖೆಯ ಭಾಗವಾಗಿ ಅಪ್ರಾಪ್ತ ವಯಸ್ಸಿನ ಮಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗಾ ದಿಕ್ಕು ತಪ್ಪಿಸಲು ಮನೆಮಗಳು ಯುವಕ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಹೇಳಲಾಗಿದೆ. ನಂತರ ವಿವರವಾಗಿ ವಿಚಾರಣೆ ನಡೆಸಿದಾಗ ಬಾಲಕಿ ಮಹಿಳಾ ಪೊಲೀಸರ ಮುಂದೆ ಕಿರುಕುಳದ ವಿವರವನ್ನು ಬಹಿರಂಗಪಡಿಸಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಷ್ಣು ಎಂದು ಹೇಳಿಕೊಂಡು ಪರಿಚಯ..!
ಈಗಾಗಲೇ ದೇಶದ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದ ತಾಹಿರ್, ಶಾಲಾ ಅವಧಿಯ ನಂತರ ಎರ್ನಾಕುಲಂ ಅಬ್ದುಲ್ ಕಲಾಂ ಮಾರ್ಗಕ್ಕೆ ನಿಯಮಿತವಾಗಿ ಬರುತ್ತಿದ್ದ ಹುಡುಗಿಯ ಪರಿಚಯವಾಗಿದೆ. ಅವಳ ಇನ್‌ಸ್ಟಾಗ್ರಾಮ್ ಐಡಿ ಖರೀದಿಸಿ ನಂತರ ಚಾಟಿಂಗ್ ಮೂಲಕ ಹುಡುಗಿಯನ್ನು ಪ್ರೀತಿಸುವಂತೆ ನಾಟಕ ಆಡಿದ್ದಾನೆ. ತಾಹಿರ್ ತನ್ನ ಹೆಸರು ವಿಷ್ಣು ಎಂದು ಹುಡುಗಿಗೆ ನಂಬಿಸಿದ್ದಾನೆ. ತಾಹಿರ್ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು. ಆಗ ತನ್ನ ಸಹಚರ ಆಶಿನ್ ಎಂಬಾತನ ಜೊತೆ ಸೇರಿ ಕಿರುಕುಳ ನೀಡಿದ ಬಗ್ಗೆ ಮಾಹಿತಿ ನೀಡಿದ್ದಾಳೆ. ಇವರಿಬ್ಬರು ಸೇರಿಕೊಂಡು ಬಾಲಕಿಯ ಚಿನ್ನಾಭರಣಗಳನ್ನು ಒಂದೊಂದಾಗಿ ದೋಚಿದ್ದರು ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರು..!
ಆರೋಪಿಗಳ ಹೆಸರು ಪೊಲೀಸರಿಗೆ ತಿಳಿಯುತ್ತಿದ್ದಂತೆ, ರೆಡ್‌ಹ್ಯಾಂಡ್ ಆಗಿ ಹಿಡಿಯಲು ಯೋಜನೆ ಹಾಕಿದ್ದಾರೆ. ಓಡಿ ಹೋಗಿದ್ದ ತಾಹಿರ್ ವಯನಾಡಿನ ಮನೆಯಿಂದ ಸಿಕ್ಕಿಬಿದ್ದಿದ್ದಾನೆ. ತಾಹಿರ್‌ನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಆಶಿನ್ ಎಂಬಾತ ಆಭರಣಗಳನ್ನು ಮಾರಾಟ ಮಾಡಿ ಗಿರವಿ ಇಟ್ಟಿದ್ದ. ಆಶಿನ್‌ ಕೊಚ್ಚಿಯಲ್ಲಿರುವುದು ಗೊತ್ತಾಗಿದೆ. ತಾಹಿರ್ ಆಶಿನ್‌ನನ್ನು ತುರ್ತಾಗಿ ನೋಡಬೇಕೆಂದು ದೂರವಾಣಿಯಲ್ಲಿ ತಿಳಿಸಿದ್ದಾನೆ. ಈ ವೇಳೆ ಬಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನಾಭರಣ ಮಾರಾಟದಿಂದ ಬಂದ ಹಣದಲ್ಲಿ ಆರೋಪಿಗಳು ಮಾದಕ ದ್ರವ್ಯ ಸೇವಿಸಿ ಅದ್ದೂರಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!