Saturday, July 25, 2026
spot_imgspot_img
spot_imgspot_img

ಮೈರ ದುರ್ಗಾ ರಂಗಮಂದಿರ ವಠಾರದಲ್ಲಿ ಆಹ್ವಾನಿತ ತಂಡಗಳ Knockout ಮಾದರಿಯ ವಾಲಿಬಾಲ್ ಪಂದ್ಯಾಟ

- Advertisement -
- Advertisement -

ದಿ! ಅಶೋಕ ಎ.ಇರಾಮೂಲೆ ಮತ್ತು ದಿ! ಹರೀಶ್ ಆಚಾರ್ಯ ಮೈರ ಸ್ಮರಣಾರ್ಥ ಮೈರ ದುರ್ಗಾ ರಂಗಮಂದಿರ ವಠಾರದಲ್ಲಿ ಆಯ್ದ ಆಹ್ವಾನಿತ ತಂಡಗಳ ಪುರುಷರ  Knockout ಮಾದರಿಯ ವಾಲಿಬಾಲ್ ಪಂದ್ಯಾಟ.

ಕೇಪು:  ಶ್ರೀ ದುರ್ಗಾಮಿತ್ರ ವೃಂದ (ರಿ.) ಮೈರ ಕೇಪು ಇದರ ವತಿಯಿಂದ ದಿ! ಅಶೋಕ ಎ.ಇರಾಮೂಲೆ ಮತ್ತು ದಿ! ಹರೀಶ್ ಆಚಾರ್ಯ ಮೈರ ಸ್ಮರಣಾರ್ಥ  ಆಯ್ದ ಆಹ್ವಾನಿತ ತಂಡಗಳ ಪುರುಷರ  Knockout ಮಾದರಿಯ ವಾಲಿಬಾಲ್ ಪಂದ್ಯಾಟ 14-03-2021ನೇ ಆದಿತ್ಯವಾರ ಶ್ರೀ ದುರ್ಗಾ ರಂಗಮಂದಿರದ ವಠಾರ ಮೈರದಲ್ಲಿ ನಡೆಯಿತು.

ವಾಲಿಬಾಲ್ ಪಂದ್ಯಾಟದಲ್ಲಿ 16 ತಂಡಗಳು ಬಾಗವಹಿಸಿದ್ದವು.ಪಂದ್ಯಾಟದ ದ್ವಜರೋಹನವನ್ನು ಗಿರೀಶ್ ಕಲ್ಲಪಾಪು, ಕ್ರೀಡಾ ಕಾರ್ಯದರ್ಶಿ ನೆರವೇರಿಸಿದರು.

ಉದ್ಘಾಟನೆಯನ್ನು ವಾಸಪ್ಪ ಬಂಗೇರ ಕಲ್ಲದಂಬೆ ,ಕಿರಣ್ ಕುಕ್ಕೆಬೆಟ್ಟು , ನಾಗೇಶ್ ಮಾಸ್ಟರ್ ,ಮಿಥುನ್‌ ,ಪಾರೀಶ್ ವರುಣ್, ಬಾಲಕೃಷ್ಣ ಪೆಲತ್ತಡಿ, ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ  ಶ್ರವಣ್ ಮೈರ , ಶನೀದ್, ಪ್ರವೀಣ್, ಪುನೀತ್ ಕಲ್ಲಪಾಪು, ಮನೀಶ್ ಮೈರ , ಮಿಥುನ್‌ ಮೈರ, ವರುಣ್ ಮೈರ , ಪಾರೀಶ್ , ಹಾಗೂ ಶ್ರೀ ದುರ್ಗಾಮಿತ್ರ ವೃಂದ ಹಿರಿಯ ಮತ್ತು ಕಿರಿಯ ಸರ್ವ ಸದಸ್ಯರು ಬಾಗವಹಿಸದ್ದರು.ಜಗಜೀವನ್ ರಾಮ್ ಶೆಟ್ಟಿ , ಸೀನ ನಾಯಕ್ ಕಲ್ಲಪಾಪು, ಪುರುಷೋತ್ತಮ ಮೈರ , ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಉಪಸ್ಥಿತರಿದ್ದರು.

ವಾಲಿಬಾಲ್ ಪಂದ್ಯಾಟದ ಪ್ರಥಮ ಬಹುಮಾನ 4001 ನಗದು ಹಾಗೂ ಶ್ರೀ ದುರ್ಗಾ ಟ್ರೋಫಿ ವನ್ನು ” ದರ್ಬೆ ತಂಡವು” ಪಡೆದು ಕೊಂಡರೆ ,ದ್ವಿತೀಯ ಬಹುಮಾನ 3001 ನಗದು ಹಾಗೂ ಶ್ರೀ ದುರ್ಗಾ ಟ್ರೋಫಿ ಯನ್ನು ನೀರ್ಕಜೆ ‘ಸಿ’ತಂಡ ಪಡೆಯಿತು. ತೃತೀಯ ಮತ್ತು ಚತುರ್ಥ ಬಹುಮಾನವನ್ನು ನೀರ್ಕಜೆ  ‘ಬಿ’ ತಂಡ ಹಾಗೂ ತುಳುನಾಡ್ ಪೈಟರ್ಸ ಕೇಪು ಪಡೆದುಕೊಂಡಿತ್ತು.

ಉತ್ತಮ ಹೊಡೆತಗಾರ ನಾಗಿ ಅಬಿಷೇಕ್ ದರ್ಬೆ ಉತ್ತಮ ಪಾಸರ್ ಹಾಗಿ ಪ್ರದ್ವಿನ್ ದರ್ಬೆ. ಮತ್ತು ಸವ್ಯಸಾಚಿ ಅಪ್ತಾಬ್ ನೀರ್ಕಜೆ ಬಹುಮಾನ ವನ್ನು ಪಡೆದುಕೊಂಡರು. ತೀರ್ಪುಗಾರರಾಗಿ  ರಾಜ್ಯ ಮಟ್ಟದ ಆಟಗಾರ ನಿರಂಜನ್ ಕಲ್ಲಪಾಪು , ಸೇಸಪ್ಪ ಮಾಸ್ಟರ್ , ಗಿರೀಶ್ ಬಿ ಸಿ ರೋಡ್, ಮಹಮ್ಮದ್ ಸಾಹನ್, ಅರವಿಂದ ನೀರ್ಕಜೆ, ರವೀಂದ್ರ ಅಳಿಕೆ ನೆರವೇರಿಸಿದರು.

ಗಂಗು ಮತ್ತು ಮಕ್ಕಳು ಕೊರತಿಗದ್ದೆ , ಜಗಜೀವನ್ ರಾಮ್ ಶೆಟ್ಟಿ ,ಸುಧಾಕರ ಶೆಟ್ಟಿ ಬೆಂಗ್ರೋಡಿ ,ಬಾಲಕೃಷ್ಣ ಪೆಲತ್ತಡಿ , ಸುಧಾಕರ ಪೂಜಾರಿ ಬಡೆಕೋಡಿ , ಜನಾರ್ದನ ಕುಲಾಲ್ ಕೇಪು , ಸಂತೋಷ ಶೆಟ್ಟಿ ಹೋಟೆಲ್ ಪರಿಮಳ ವಿಟ್ಲ , ವಸಂತ ಯಂ ಎರುಂಬು, ವಾಸಪ್ಪ ಬಂಗೇರ ಹಾಗೂ ಪತ್ರಕರ್ತ ಕಿರಣ್ ಕೊಟ್ಯಾನ್ ಕೇಪು, ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

- Advertisement -

Related news

error: Content is protected !!