- Advertisement -
- Advertisement -
ಆಸ್ತಿ ವಿಚಾರವಾಗಿ ಮೈದುನನೇ ಅತ್ತಿಗೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೊತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿದ್ದ ಮೂರು ಎಕರೆ ಜಮೀನಿಗಾಗಿ ಅಣ್ಣ ಮುರುಳಿ ಹಾಗೂ ತಮ್ಮ ಚಲಪತಿ ಮಧ್ಯೆ ಗಲಾಟೆ ಇತ್ತು. ಹೀಗಾಗಿ, ಕೋಪಗೊಂಡ ಚಲಪತಿ ಮನೆಯಲ್ಲಿದ್ದ ಮುರುಳಿ ಪತ್ನಿ ತೇಜಸ್ವಿನಿಯನ್ನು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿದ್ದಾನೆ.
ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ಅಲ್ಲಿಂದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಬೇತಮಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
- Advertisement -