- Advertisement -
- Advertisement -
ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ – ಪುತ್ತೂರು ಇದರ ವತಿಯಿಂದ ಕುಂಜೂರುಪಂಜ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಜರುಗಿತು.
ಪುತ್ತೂರು ಅಂಚೆ ಕಚೇರಿಯ ಉಪ ಅಧೀಕ್ಷಕರಾದ ಲೋಕನಾಥ್ ಇವರು ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಿಸಿದರು.
ಈ ಸಮಯ ಆರ್ಯಾಪು ಪೋಸ್ಟ್ ಮಾಸ್ಟರ್ ನವೀನ್, ಕುಂಜೂರುಪಂಜ ಕಾರ್ಯಕರ್ತೆ ವೇದವತಿ, ಸಹಾಯಕಿ ಶರ್ಮಿಳಾ, ಬಾಲ ವಿಕಾಸ ಸಮಿತಿ ಇದರ ಅಧ್ಯಕ್ಷೆ ಸೌಮ್ಯ ಜಯರಾಮ್ ನಾಯ್ಕ್ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
- Advertisement -