



ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317 ಡಿಯ ಮಿಷನ್ 1.5 ಸಮ್ಮೇಳನವು ನಗರದ ಎಜೆ ಗ್ರಾಂಡ್ ಎಲೈಟ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಉದ್ಘಾಟಿಸಿದರು. ಗ್ಲೋಬಲ್ ಆಕ್ಷನ್ ಟೀಮ್ ಮುಖ್ಯಸ್ಥರಾದ ವಿಜಯ ವಿಷ್ಣುಮಯ್ಯ ಅಧ್ಯಕ್ಷತೆ ವಹಿಸಿದರು. ಅಂತರಾಷ್ಟ್ರೀಯ ತರಬೇತುದಾರ ಲಯನ್ಸ್ ಮಲ್ಟಿಪಲ್ 317 ಹಾಗೂ 318ರ ಗ್ಯಾಟ್ ಏರಿಯಾ ಮುಖ್ಯಸ್ಥ ವಾಮನ್ ಕುಮಾರ್ ತರಬೇತಿ ನೀಡಿದರು.
ಮಿಷನ್ 1.5 ಸಾಧಿಸುವಲ್ಲಿ ಕ್ಲಬ್ ನ ಅಧ್ಯಕ್ಷರ ಮತ್ತು ಸದಸ್ಯರ ನಾಯಕತ್ವದ ಬಗ್ಗೆ ಪಿಎಂಸಿಸಿ ಮಲ್ಟಿಪಲ್ 317 ರ ನಾಯಕರಾದ ಮಾಜಿ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು ದ್ವಿತೀಯ ಉಪ ಗವರ್ನರ್ ರಾದ ಗೋವರ್ಧನ್ ಶೆಟ್ಟಿ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ನ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಗವರ್ನರ್ ಕಾರ್ಡಿನೇಟರ್ ಲ್ಯಾನ್ಸಿ ಮಸ್ಕರಾನ್ಹಸ್ ಗವರ್ನರ್ ಕಾರ್ಡಿನೇಟರ್ ಜ್ಯೋತಿ ಶೆಟ್ಟಿ ಜಿಎಲ್ ಟಿ ಮುಖ್ಯ ಸಂಯೋಜಕರಾದ ಉಮಾ ಹೆಗ್ಡೆ ಜಿಎಸ್ಟಿ ಮುಖ್ಯ ಸಂಯೋಜಕರು ರಾಮನಂದ ನೂಜಿಪ್ಪಾಡಿ ಕ್ಲಬ್ ರಿಟೆನ್ಶನ್ ಮುಖ್ಯ ಸಂಯೋಜಕರಾದ ಜಗದೀಶ್ ಯಡಪಡಿತಾಯ ಕ್ಲಬ್ ಓರಿಯೆಂಟಸನ್ ಮುಖ್ಯ ಸಂಯೋಜಕರಾದ ಲ್ಯಾನ್ಸಿ ಕಾರ್ಲೋ ಮಹಿಳಾಭಿವೃದ್ಧಿ ಮುಖ್ಯ ಸಂಯೋಜಕರು ದೇವಿಕಾ ಸೋಮಶೇಖರ್ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ಮುಂತಾದವರು ಉಪಸ್ಥಿತರಿದ್ದರು .
ಲಯನ್ಸ್ ಅನುದಾನದ ಮುಖ್ಯ ಸಂಯೋಜಕ ಪಿವಿ ಅನಿಲ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು ಜಿಎಂಟಿ ಮುಖ್ಯ ಸಾಯೋಜಕರು ಮಹದೇವಪ್ಪ ವಂದನಾರ್ಪಣೆ ಸಲ್ಲಿಸಿದರು.








