Friday, April 26, 2024
spot_imgspot_img
spot_imgspot_img

ಎಂ.ಫ್ರೆಂಡ್ಸ್ ತಂಡದಿಂದ ಜಿಲ್ಲಾಧಿಕಾರಿ ಭೇಟಿ

- Advertisement -G L Acharya panikkar
- Advertisement -

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಮಂಗಳವಾರ (08/09/20) ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರನ್ನು ಅವರ ಕಛೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು.

ಎಂ.ಫ್ರೆಂಡ್ಸ್ ತಂಡ ದಾನಿಗಳ ಸಹಕಾರದೊಂದಿಗೆ ಕಾರುಣ್ಯ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ನಿರಂತರ ಉಚಿತ ರಾತ್ರಿಯ ಉಪಹಾರ ನೀಡುತ್ತಾ ಬಂದಿದ್ದು, ಸೆಪ್ಟಂಬರ್ 14 ಸೋಮವಾರಕ್ಕೆ ಒಂದು ಸಾವಿರ ದಿನಗಳಾಗುತ್ತವೆ. ಅದರ ನೆನಪಿಗೋಸ್ಕರ ಸರಳ ಕಾರ್ಯಕ್ರಮವೊಂದನ್ನು ಆಯೋಜಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಕಾರುಣ್ಯದ ಸೇವೆ ನೀಡಿ ಹಸಿದವರ ಹೊಟ್ಟೆ ತಣಿಸುವ ಕೈಂಕರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ಸೂಚಿಸಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಉಪಾಧ್ಯಕ್ಷ ಸುಜಾಹ್ ಮಹಮ್ಮದ್, ಸದಸ್ಯರಾದ ಹನೀಫ್ ಕುದ್ದುಪದವು, ಮಹಮ್ಮದ್ ಟಿ.ಕೆ., ಹಾರಿಸ್ ಕಾನತ್ತಡ್ಕ ಈ ಸಂದರ್ಭ ಉಪಸ್ಥಿತರಿದ್ದರು. ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯ ಅಧೀಕ್ಷಕರಾದ ಡಾ. ಸದಾಶಿವ ಅವರನ್ನೂ ಎಂ.ಫ್ರೆಂಡ್ಸ್ ಭೇಟಿ ಮಾಡಿ ಮಾತುಕತೆ ನಡೆಸಿತು.

- Advertisement -

Related news

error: Content is protected !!