Saturday, April 27, 2024
spot_imgspot_img
spot_imgspot_img

ಮಂಗಳೂರು: ಸಿಡಿಲಿನಿಂದ ಹಾನಿಯಾದ ಮನೆಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಚ್ಚನಾಡಿ ವಾರ್ಡ್ ನ ದೇವಿ ಕ್ಯಾಟರಿಂಗ್ ಬಳಿ ಮಹಾನಗರ ಪಾಲಿಕೆ ಅನುದಾನದಿಂದ ಆಗುತ್ತಿರುವ ರಸ್ತೆ ಕಾಂಕ್ರೀಟಿಕರಣ, ಮೈನ್ ಬ್ರಿಡ್ಜ್ ನಿಂದ ವೆಟ್ ವೆಲ್ ಆಗಿ ಮಂಜಲಪಾದೆ ಸಂಪರ್ಕಿಸುವ ಜಲಸಿರಿ ಯೋಜನೆಯ ರಸ್ತೆ ಡಾಮರೀಕರಣ, ದೇವಿನಗರ ಬಳಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಕಾಮಗಾರಿಗಳನ್ನು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಪರಿಶೀಲಿಸಿ ಸೂಕ್ತ ನಿರ್ದೇಶನಗಳನ್ನು ನೀಡಿದರು. ಶಾಸಕರೊಂದಿಗೆ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೊಂದೇಲ್ ಹಾಗೂ ಸ್ಥಳೀಯ ಪ್ರಮುಖರು ಸಾಥ್ ನೀಡಿದರು.

ಮನೆಹಾನಿ ಪರಿಶೀಲಿಸಿದ ಶಾಸಕರು ಪಚ್ಚನಾಡಿ ವಾರ್ಡ್ ನ ಆಶ್ರಯ ನಗರದಲ್ಲಿ ಮೊನ್ನೆ ಸುರಿದ ಭಾರೀ ಮಳೆ ಹಾಗೂ ಸಿಡಿಲಿಗೆ ಹಾನಿಗೀಡಾದ ಮನೆಗಳಿಗೆ ಶಾಸಕರಾದ ಭರತ್ ಶೆಟ್ಟಿ ವೈ ರವರು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೊಂದೆಲ್ ,ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಬೂತ್ ಅಧ್ಯಕ್ಷ ಆರ್ ಕೆ ಶೆಟ್ಟಿ, ಸದಸ್ಯೆ ವೀಣಾ ದಾಮೋದರ್ ಹಾಗೂ ಇನ್ನಿತರ ಕಾರ್ಯ ಕರ್ತರು ಉಪಸ್ಥಿತರಿದ್ದರು. ಅಲ್ಲದೆ ಬೂತ್ ಅಧ್ಯಕ್ಷರ ಮನೆಗೂ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

- Advertisement -

Related news

error: Content is protected !!