- Advertisement -
- Advertisement -
ಮಂಗಳೂರು, ನವೆಂಬರ್ 26: ಗುರುವಾರ ಮಧ್ಯರಾತ್ರಿಯ ನಂತರ ಇಲ್ಲಿನ ಬೊಕ್ಕಪಟ್ಟಣದ ಕರ್ನಾಲ್ ಗಾರ್ಡನ್ನಲ್ಲಿ ರೌಡಿ-ಶೀಟರ್ ಹತ್ಯೆಯಾಗಿದೆ. ಮೃತನನ್ನು ಇಂದ್ರಜಿತ್ (29) ಎಂದು ಗುರುತಿಸಲಾಗಿದೆ.
ಇಂದ್ರಜಿತ್ ರಾತ್ರಿ ಮೆಹೆಂದಿ ಸಮಾರಂಭದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ಸಂದರ್ಭದಲ್ಲಿ ಹತ್ಯೆಯಾಗಿರುವ ಶಂಕೆಯಿದೆ. ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಶೀಘ್ರವೇ ಪ್ರಕರಣ ಭೇದಿಸುವ ವಿಶ್ವಾಸವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
- Advertisement -